ಪುತ್ತೂರು: ಚಿಕ್ಕಬಳ್ಳಾಪುರದಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ಕರಿ ವಿದ್ಯಾಲಯದ ಅಂತರ್ ಕಾಲೇಜು ಅಥ್ಲೆಟಿಕ್ ಸ್ಪರ್ಧೆಯಲ್ಲಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಮೇಕಾನಿಕ್ ವಿಭಾಗದ ಪ್ರತೀಕ್ ಗೌಡ ಕೆಮ್ಮಾಯಿಯವರು ಎತ್ತರ ಜಿಗಿತ್ತದಲ್ಲಿ ಚಿನ್ನದ ಪದಕ ಗಳಿಸಿರುತ್ತಾರೆ ಹಾಗೂ ಕಾಲೇಜಿನ ಇತಿಹಾದಲ್ಲಿಯೇ ಪ್ರಥಮಬಾರಿಗೆ ಇವರ ನಾಯಕ್ವದಲ್ಲಿ ಸಮಗ್ರ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇವರಿಗೆದೈಹಿಕ ಶಿಕ್ಷಣನಿರ್ದೇಶಕ ಬಾಲಚಂದ್ರ ಗೌಡ ಬೆಳ್ಳಿಪ್ಪಾಡಿ ಬಾರ್ತಿಕುಮೇರು ಹಾಗೂ ಅಥ್ಲೆಟಿಕ್ ಕೋಚ್ರ ವಿಶಂಕರ್ ಮುಕುಂದರವರು ತರಬೇತಿ ನೀಡಿರುತ್ತಾರೆ. ಇವರು ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಶ್ರೀನಿಧಿ ಜನರಲ್ ಸ್ಟೋರ್ ಎಂ ಹೊನ್ನಪ್ಪ ಗೌಡ ಮತ್ತು ಉಮಾವತಿಯವರ ಪುತ್ರ.