ನೆಲ್ಯಾಡಿ: ಗೋಳಿತ್ತೊಟ್ಟು ಗ್ರಾಮ ಪಂಚಾಯತ್ನಲ್ಲಿ ಕುಡಿಯುವ ನೀರು ನಿರ್ವಾಹಕರ ಸಭೆ ಜು.೧೨ರಂದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ಗ್ರಾ.ಪಂ.ಅಧ್ಯಕ್ಷ ಜನಾರ್ದನ ಪಟೇರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಚಂದ್ರಾವತಿಯವರು ಮಾತನಾಡಿ, ಗ್ರಾ.ಪಂ.ವ್ಯಾಪ್ತಿಯಲ್ಲಿ ೨೭ ಕುಡಿಯುವ ನೀರಿನ ಸ್ಥಾವರಗಳಿವೆ. ಸರಕಾರದ ಸುತ್ತೋಲೆಯಂತೆ ಪ್ರತಿಯೊಂದು ಸ್ಥಾವರಗಳಿಗೂ ಸಮಿತಿ ರಚನೆ ಆಗಬೇಕಾಗಿದೆ ಎಂದರು. ಕುಡಿಯುವ ನೀರಿನ ಬಳಕೆದಾರರಿಂದ ಬಂದಿರುವ ದೂರುಗಳ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಿತು. ನೀರು ನಿರ್ವಾಹಕ ಸಮಸ್ಯೆಗಳ ಕುರಿತೂ ಗಮನ ಹರಿಸಲಾಯಿತು. ಉಪಾಧ್ಯಕ್ಷೆ ಶೋಭಾಲತಾ ಕೋಲ್ಪೆ, ಪಿಡಿಒ ಜಗದೀಶ್ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯರುಗಳಾದ ಕೆ.ಬಾಬು ಪೂಜಾರಿ, ಶಿವಪ್ರಸಾದ್, ಬಾಲಕೃಷ್ಣ ಅಲೆಕ್ಕಿ, ನೋಣಯ್ಯ ಗೌಡ, ಹೇಮಲತಾ, ಶೃತಿ ಪಿ., ಗುಲಾಬಿ, ಸವಿತಾ ಆಲಂತಾಯ, ಸಂಧ್ಯಾ, ವಾರಿಜಾಕ್ಷಿ, ವಿ.ಸಿ.ಜೋಸೆಫ್, ನೀರು ನಿರ್ವಾಹಕರಾದ ಗಣೇಶ್ ಬೊಟ್ಟಿಮಜಲು, ಶೀನಪ್ಪ ಸಭೆಯಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಬಾಬು ನಾಯ್ಕ್, ಪುಷ್ಪಾ ಜಯಂತ್, ದಿನೇಶ್, ಯಶವಂತ, ಕೀರ್ತಿಕಾ ಸಹಕರಿಸಿದರು.