ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸರಕಾರಿ ಪ್ರೌಢಶಾಲೆ ಕೊಂಬೆಟ್ಟು ಇಲ್ಲಿ ಜು.13 ರಂದು ಜರಗಿದ ವಲಯ ಮಟ್ಟದ ಚದುರಂಗ ಸ್ಪರ್ಧೆಯ 17ರ ವಯೋಮಾನದ ಬಾಲಕರ ವಿಭಾಗದಲ್ಲಿ ಹತ್ತನೇ ತರಗತಿಯ ಅಕ್ಷಯ್ ರೈ ಹಾಗೂ ಲಿಶಾನಿ ಮಿರಾಂಡ, 14ನೇ ವಯೋಮಾನದ ಎಂಟನೇ ತರಗತಿ ವಿಭಾಗದಲ್ಲಿ ಅನೀಷ್ ಎಲ್.ರೈ ಹಾಗೂ ಜೆಸಿತ್ಸಿ ಎಸ್, 8ನೇ ತರಗತಿ ಬಾಲಕಿಯರ ವಿಭಾಗದಲ್ಲಿ ಹನಿಕ ಯು ಹಾಗೂ 14ರ ವಯೋಮಾನದ ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಭಗತ್ ಕೃಷ್ಣರವರು ಸ್ಪರ್ಧಿಸಿದ್ದು, ಕೊಡಿಪ್ಪಾಡಿ ಶಾಲೆಯಲ್ಲಿ ಜು.25 ರಂದು ನಡೆಯುವ ತಾಲೂಕು ಮಟ್ಟದ ಚದುರಂಗ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ತಂಡದ ವ್ಯವಸ್ಥಾಪಕಿಯಾಗಿ ದೈಹಿಕ ಶಿಕ್ಷಣ ಶಿಕ್ಷಕಿ ಲೀಲಾವತಿರವರು ಕಾರ್ಯ ನಿರ್ವಹಿಸಿದ್ದರು ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಶೋಭಾ ನಾಗರಾಜ್ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.