ಪುತ್ತೂರು: ಬನ್ನೂರು ಶಿವಪಾರ್ವತಿ ಮಂದಿರದ ಆಶ್ರಯದಲ್ಲಿ ಬನ್ನೂರು ರಾಜ್ ಗೋಪಾಲ್ ಭಟ್ರವರ ಪ್ರಾಯೋಜಿತವಾಗಿ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದಿಂದ ತಿಂಗಳ ಸರಣಿ ಯಕ್ಷಗಾನ ತಾಳಮದ್ದಳೆ ಭೀಷ್ಮ ವಿಜಯ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಹೊಸಮೂಲೆ ಗಣೇಶ್ ಭಟ್, ನಿತಿಶ್ ಕುಮಾರ್ ಮನೊಳಿತ್ತಾಯ ಎಂಕಣ್ಣಮೂಲೆ ಪದ್ಯಾಣ ಶಂಕರನಾರಾಯಣ ಭಟ್, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಗುಂಡ್ಯಡ್ಕ ಈಶ್ವರ ಭಟ್ ( ಭೀಷ್ಮ ), ಕು೦ಬ್ಳೆ ಶ್ರೀಧರ್ ರಾವ್ ( ಅಂಬೆ ), ಡಾ.ವಿದ್ವಾನ್ ವಿನಾಯಕ ಭಟ್ ಗಾಳಿಮನೆ ( ಪರಶುರಾಮ ), ಭಾಸ್ಕರ್ ಬಾರ್ಯ ( ಸಾಲ್ವ ), ಪೇರೋಡಿ ಅಶೋಕ ಸುಬ್ರಹ್ಮಣ್ಯ ( ವೃದ್ಧವಿಪ್ರ ) ಸಹಕರಿಸಿದರು. ಮಂದಿರದ ಅಧ್ಯಕ್ಷ ವಿಶ್ವನಾಥ ಗೌಡರವರು ಪ್ರಾಯೋಜಿತರನ್ನು ಶಾಲು ಹೋದಿಸಿ ಗೌರವಿಸಿದರು. ಟಿ.ರಂಗನಾಥ ರಾವ್ ಸ್ವಾಗತಿಸಿ ಚಾರಪ್ರದೀಪ ಹೆಬ್ಬಾರ್ ವಂದಿಸಿದರು.