ಪುತ್ತೂರು:ಸುಳ್ಯದಿಂದ ಪುತ್ತೂರಿಗೆ ಬೆಳಗ್ಗಿನ ಅವಧಿಯಲ್ಲಿ ಬಸ್ ಗಳ ಸಂಖ್ಯೆ ಕಡಿಮೆ ಇದ್ದು,ಈ ಮಾರ್ಗದಲ್ಲಿ ಬಸ್ ಸಂಖ್ಯೆ ಹೆಚ್ಚಿಸುವಂತೆ ಪುತ್ತೂರಿನ ಎನ್.ಎಸ್.ಯು.ಐ ಘಟಕದ ಪದಾಧಿಕಾರಿಗಳು ಕೆ.ಎಸ್.ಆರ್.ಟಿ.ಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಕರ್ ಶೆಟ್ಟಿಯವರಿಗೆ ಮನವಿ ಸಲ್ಲಿಸಿದರು.
ಮನವಿಯನ್ನು ಸ್ವೀಕರಿಸಿದ ಕಾರ್ಯನಿರ್ವಹಣಾಧಿಕಾರಿ ಜಯಕರ ಶೆಟ್ಟಿ ತಕ್ಷಣವೇ ಸುಳ್ಯದಿಂದ ಪುತ್ತೂರಿಗೆ ಬೆಳಗ್ಗಿನ ಸಮಯದಲ್ಲಿ ಸಂಚರಿಸುವ ಬಸ್ ಗಳ ಪಟ್ಟಿಯನ್ನು ತರಿಸಿದರು. ಈ ಸಂದರ್ಭದಲ್ಲಿ 15 ನಿಮಿಷಕ್ಕೊಂದು ಬಸ್ ಗಳು ಇವೆ ಎಂದು ಪಟ್ಟಿಯಲ್ಲಿ ಇದ್ದರೂ, ನಿಗದಿತ ಸಮಯಕ್ಕೆ ಬಸ್ ಗಳು ಸಂಚರಿಸುತ್ತಿಲ್ಲ ಎಂಬ ವಿಚಾರವು ಬೆಳಕಿಗೆ ಬಂದಿದೆ. ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳುತ್ತೇನೆ ಎಂದು ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ NSUI ಮುಖಂಡರಾದ ಭಾತೀಷ್ ಅಳಕೆಮಜಲು ಮತ್ತು ತಮೀಜ್ ಕೋಲ್ಪೆ, NSUI ಅಧ್ಯಕ್ಷ ಚಿರಾಗ್ ರೈ, ಪ್ರಧಾನ ಕಾರ್ಯದರ್ಶಿ ಎಡ್ವರ್ಡ್ ಡಿಸೋಜ, ನಗರ NSUI ಅಧ್ಯಕ್ಷ ಸುಹೈಲ್, ಮತ್ತು ಹಾರಿಸ್ ಉಪಸ್ಥಿತರಿದ್ದರು.