ನೆಲ್ಯಾಡಿ: ಡಿ.ಕೆ.ಆರ್.ಡಿ.ಎಸ್. ಬೆಳ್ತಂಗಡಿ, ಜೀವ ಜ್ಯೋತಿ ಮಹಾಸಂಘ ಕುಟ್ರುಪ್ಪಾಡಿ ಹಾಗೂ ಕಿರಣ್ ಮಹಿಳಾ ತಾಲೂಕು ಒಕ್ಕೂಟ ಕಡಬ ಇವರ ನೇತೃತ್ವದಲ್ಲಿ ಲಕ್ಷ್ಮಣ ಫಲ ಗಿಡ ವಿತರಣೆ ಮತ್ತು ಗಿಡ ನೆಡುವ ಕಾರ್ಯಕ್ರಮ ಕಡಬ ತಾಲೂಕಿನ ಕುಟ್ರುಪ್ಪಾಡಿ ಚರ್ಚ್ ಆವರಣದಲ್ಲಿ ನಡೆಯಿತು.
ಕುಟ್ರುಪ್ಪಾಡಿ ಚರ್ಚಿನ ಧರ್ಮಗುರು ಫಾ.ಜೋಸ್ ಆಯಾಂಕುಡಿಯವರು ವನಮಹೋತ್ಸವದ ಮಹತ್ವವನ್ನು ತಿಳಿಸಿದರು. ಮಹಾಸಂಘದ ಮಹಿಳೆಯರ ಸಹಕಾರದಿಂದ ಗಿಡಗಳನ್ನು ನೆಟ್ಟು ವನಮಹೋತ್ಸವ ಆಚರಿಸಲಾಯಿತು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕ ಫಾ.ಬಿನೋಯಿ ಎ.ಜೆ.ರವರು ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಲಕ್ಷ್ಮಣ ಫಲ ಗಿಡಗಳನ್ನು ವಿತರಿಸಿದರು. ಒಕ್ಕೂಟದ ಅಧ್ಯಕ್ಷೆ ಉಷಾ ಜೋಯಿ, ಕೋಶಾಧಿಕಾರಿ ಶೈಲ, ಸಂಯೋಜಕಿ ಸಿಸಿಲ್ಯಾ ತಾವ್ರೋ, ಕಾರ್ಯಕರ್ತರಾದ ಸುಶೀಲಾ, ತೇಜಾವತಿ ಮತ್ತು ಒಕ್ಕೂಟದ ಪದಾಧಿಕಾರಿಗಳು, ಸಹಾಯಕ ಧರ್ಮಗುರು ಫಾ.ವಿಲಿಯಂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.