ಪುತ್ತೂರು: ಹತ್ಯೆಗೀಡಾಗಿರುವ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರ್ ಅವರ ಮೃತದೇಹದ ಅಂತಿಮ ದರ್ಶನ ಪಡೆಯಲು ಬೆಳ್ಳಾರೆಗೆ ಬಂದ ಆರ್.ಎಸ್.ಎಸ್.ನಾಯಕ ಡಾ. ಪ್ರಭಾಕರ ಭಟ್ ಕಲ್ಲಡ್ಕರವರನ್ನು ಸುತ್ತುವರಿದು ಧಿಕ್ಕಾರ ಕೂಗಿದ ಹಿಂದು ಸಂಘಟನೆಯ ಕಾರ್ಯಕರ್ತರು ಡೋಂಗೀ ಡೋಂಗಿ ಎಂದು ಘೋಷಣೆ ಕೂಗಿದ ಘಟನೆ ಇದೀಗ ನಡೆದಿದೆ.