ಪುತ್ತೂರು: ನರಿಮೊಗರು ಗ್ರಾಮ ಪಂಚಾಯತ್ನಲ್ಲಿ ಗ್ರಾಮ ಚದುರಂಗ ಆಡೋಣ ಚದುರಂಗ ಕಾರ್ಯಕ್ರಮ ನಡೆಯಿತು. ಎಸ್ಜಿಎಂ ಪ್ರೌಢ ಶಾಲೆಯ ನಿವೃತ್ತ ಮುಖ್ಯಗುರು ಶ್ರೀನಿವಾಸ್ ಕಾರ್ಯಕ್ರಮ ಉದ್ಘಾಟಿಸಿದರು. ನರಿಮೊಗರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರವಿಚಂದ್ರ, ಕಾರ್ಯದರ್ಶಿ ಕಲಂದರ್, ಗ್ರಂಥಪಾಲಕ ವರುಣ್ ಕುಮಾರ್, ಗ್ರಾ.ಪಂ. ಸದಸ್ಯ ಗಣೇಶ ಮುಕ್ವೆ, ವೀರಮಂಗಲ ಶಾಲೆಯ ಮುಖ್ಯಗುರು ತಾರಾನಾಥ ಸವಣೂರು, ಮುಕ್ವೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ವಿಮಲಾ ಉಪಸ್ಥಿತರಿದ್ದರು.
ನರಿಮೊಗರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಪ್ರಾಥಮಿಕ ಶಾಲೆಗಳಿಂದ ತಲಾ ಎರಡು ಮಕ್ಕಳು ಭಾಗವಹಿಸಿದ್ದರು. ಪ್ರಥಮ ಸ್ಥಾನವನ್ನು ವೀರಮಂಗಲ ಶಾಲೆಯ ಶಶಾಂಕ್, ದ್ವೀತೀಯ ಸ್ಥಾನವನ್ನು ವೀರಮಂಗಲ ಶಾಲೆಯ ಕೃತಿಕಾ ತೃತೀಯ ಸ್ಥಾನವನ್ನು ಮುಕ್ವೆ ಶಾಲೆಯ ಲಿಖಿತ್ ಪಡೆದುಕೊಂಡರು. ತಾಲೂಕು ಮಟ್ಟದ ಸ್ಪರ್ದೆಗೆ ಶಶಾಂಕ ವೀರಮಂಗಲ ಆಯ್ಕೆಗೊಂಡರು.