ಪುತ್ತೂರು: ಭಾರತ ಕಟ್ಟಡ ಕಾರ್ಮಿಕ ಸಂಘದ ವತಿಯಿಂದ ಬೊಳುವಾರು ಶಾಲೆಯಲ್ಲಿ ಮಂಗಳ ಆಸ್ಪತ್ರೆಯವರ ಸಹಕಾರೊಂದಿಗೆ ಉಚಿತ ಕಣ್ಣು ತಪಾಸಣಾ ಶಿಬಿರವು ಆ.೭ರಂದು ನಡೆಯಿತು.
ನಗರಸಭಾಧ್ಯಕ್ಷ ಜೀವಂಧರ ಜೈನ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಕಾರ್ಮಿಕರು ದೇಶದ ಪ್ರಮುಖ ಆಸ್ತಿ ಇದನ್ನು ಮನಗಂಡು ಸರಕಾರ ಅವರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ ಕೊರೋನ ಸಮಯದಲ್ಲಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಇದರೊಂದಿಗೆ ಖಾಸಗಿ ಆಸ್ಪತ್ರೆಗಳು ಸಂಸ್ಥೆಗಳೂ ಕೂಡ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಅಭಿನಂದನೀಯ ಎಂದರು. ಭಾರತ್ ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಲೋಕೇಶ ಹೆಗ್ಡೆಯವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವೇದಿಕೆಯಲ್ಲಿ ನಗರಸಭಾ ಸದಸ್ಯ ಸಂತೋಷ್ ಬೊಳುವಾರು, ಶಾಲಾ ಮುಖ್ಯೋಪಧ್ಯಾಯಿನಿ ನಿವೇದಿತಾ, ಸಂಘದ ಕಾರ್ಯಾಧ್ಯಕ್ಷ ಪೌಲ್ ಡಿಸೋಜ, ಬಶೀರ್ ಅಹ್ಮದ್, ರುಕ್ಮಯ ಗೌಡ, ಮಹಮದ್ ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು ಸಂಘದ ಅಧ್ಯಕ್ಷ ಇನಾಸ್ ವೇಗಸ್ ವಂದಿಸಿದರು.