ಪುತ್ತೂರು ಬಂಟರ ಸಂಘದಿಂದ ಬಲ್ನಾಡು ಸಾರ್ಯ ವಿಶ್ವನಾಥ ರೈಯವರ ಮನೆ ನಿರ್ಮಾಣಕ್ಕೆ 50 ಸಾವಿರ ಧನಸಹಾಯ ವಿತರಣೆ

0

ಪುತ್ತೂರು: ಬಲ್ನಾಡು ಗ್ರಾಮದ ಸಾರ್ಯ ಅಬರೆಗುರಿ ನಿವಾಸಿ ವಿಶ್ವನಾಥ ರೈರವರ ಮನೆಯು ಧಾರಕಾರ ಮಳೆಯಿಂದಾಗಿ ಕುಸಿತಗೊಂಡಿದ್ದು, ಇವರ ಮನೆ ನಿರ್ಮಾಣಕ್ಕೆ ಪುತ್ತೂರು ತಾಲೂಕು ಬಂಟರ ಸಂಘದಿಂದ ರೂ 50 ಸಾವಿರ ಧನಸಹಾಯದ ಚೆಕ್‌ನ್ನು ವಿಶ್ವನಾಥ ರೈಯವರ ಮನೆಯವರಿಗೆ ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಸೆ.9ರಂದು ಹಸ್ತಾಂತರ ಮಾಡಿದರು.

ತಾಲೂಕು ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ರಮೇಶ್ ರೈ ಡಿಂಬ್ರಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ, ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ಕಿರಣ್ ರೈ ಬಲ್ನಾಡು ಹಾಗೂ ರಾಮಚಂದ್ರ ರೈ ಬೀಡುರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here