ಸಹಾಯಹಸ್ತ ಲೋಕ ಸೇವಾ ಟ್ರಸ್ಟ್ ಕರ್ನಾಟಕ, ನೊಂದವರ ಪಾಲಿಗೆ ಆಸರೆ ಪುತ್ತೂರು ಇದರ ವತಿಯಿಂದ ಸೇವಾ ಯೋಜನೆ

0

ಪುತ್ತೂರು : ಸಹಾಯಹಸ್ತ ಲೋಕ ಸೇವಾ ಟ್ರಸ್ಟ್ ಕರ್ನಾಟಕ, ನೊಂದವರ ಪಾಲಿಗೆ ಆಸರೆ ಪುತ್ತೂರು ಇವರ ವತಿಯಿಂದ ಸೇವಾಯೋಜನೆ ನೆಲ್ಲಿಕಟ್ಟೆ ಟ್ರಸ್ಟಿನ ಕಚೇರಿಯಲ್ಲಿ ನಡೆಯಿತು.

ಸಮಾರಂಭದಲ್ಲಿ ಸಮಾಜ ಸೇವಕಿ ವಕೀಲರು ಆದ  ರಾಜೇಶ್ವರಿ ಬನ್ನೂರು ಅತಿಥಿಯಾಗಿ ಆಗಮಿಸಿ ನಾವು ನಿಮಿತ್ತ ಮಾತ್ರ, ನಾವು ಮಾಡುವ ಸೇವಾ ಕಾರ್ಯ ಯಾವಾಗಲು ಶಾಶ್ವತ, ಟ್ರಸ್ಟಿಗೆ ಯಾವುದೇ ಅಡೆತಡೆ ಬಂದರು ಎದೆ ಗುಂದದೆ ನೀವು ಮುನ್ನಡೆಯಿರಿ. ನಾವು ಸದಾ ನಿಮ್ಮೊಂದಿಗೆ ಇದ್ದೇವೆ ಎಂದರು.

ಇನ್ನೊರ್ವ ಮುಖ್ಯ ಅತಿಥಿಗಳಾದ  ಅಕ್ಷತಾ ಅಜಯ್ ಕುಮಾರ್, ಹಾಗೂ  ಉಷಾ ಲಕ್ಷ್ಮೀ ಸಂದರ್ಬೋಚಿತವಾಗಿ ಮಾತನಾಡಿದರು.

ಅಧ್ಯಕ್ಷರಾಗಿ ಡಿ. ಎಸ್. ಒಡ್ಯ ಎಲ್ಲರ ಸಹಕಾರ ನಮ್ಮ ಟ್ರಸ್ಟಿಗೆ ನೀಡಿದಲ್ಲಿ ಮುಂದೆ ಇನ್ನು ಹೆಚ್ಚು ಸೇವಾಯೋಜನೆ ನಡೆಸಲು ಅನುಕೂಲ ಆಗುತ್ತದೆ ಎಂದರು. ಉದಯ ಮಧೂರು ವರದಿ ವಾಚಿಸಿ, ಕಾರ್ಯದರ್ಶಿ ಮನೋಹರ್ ಸ್ವಾಗತಿಸಿ ವಂದಿಸಿದರು. ಗಿರೀಶಮ್ಸ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಭವತಿ ಭೀಕ್ಷಾ0 ದೇಹಿ ಕಾರ್ಯಕ್ರಮದಲ್ಲಿ ಒಟ್ಟಾದ ಮೊತ್ತವನ್ನು 5 ಅರ್ಹ ಫಲಾನುಭಿವಿಗಳಿಗೆ ವಿತರಿಸಲಾಯಿತು. ಅರ್ಹ ಫಲಾನುಬಿವಿಗಳಿಗೆ ಆಹಾರ ಸಾಮಗ್ರಿ ವಿತರಿಸಲಾಯಿತು.

LEAVE A REPLY

Please enter your comment!
Please enter your name here