ಗಂಡಿಬಾಗಿಲು ಎಸ್.ಎಸ್.ಎಫ್. ಆಶ್ರಯದಲ್ಲಿ ಅಗಲಿದ ಉಲಮಾ ನೇತಾರರ ಅನುಸ್ಮರಣೆ

0

ಉಪ್ಪಿನಂಗಡಿ: ಎಸ್.ವೈ.ಎಸ್. ಮತ್ತು ಎಸ್.ಎಸ್.ಎಫ್. ಗಂಡಿಬಾಗಿಲು ಶಾಖೆ ಆಶ್ರಯದಲ್ಲಿ ತಾಜುಲ್ ಉಲಮಾ, ಶಂಸುಲ್ ಉಲಮಾ ಮತ್ತು ಅಗಲಿದ ಉಲಮಾ ನೇತಾರರ ಅನುಸ್ಮರಣೆ ಹಾಗೂ ಮುಹಿಯುದ್ದೀನ್ ಮಾಲೆ ಅಲಾಪಣೆ ಕಾರ್‍ಯಕ್ರಮ ಡಿ. 30ರಂದು ಜರಗಿತು.


ಕಾರ್‍ಯಕ್ರಮವನ್ನು ಹಾಜಿ ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಬಡ್ಡಮೆ ದುವಾಃದೊಂದಿಗೆ ಉದ್ಘಾಟಿಸಿದರು. ಸಯ್ಯದ್ ಹಂಝ ತಂಙಳ್ ಕರ್ಪಾಡಿ ಅಜಿಲಮೊಗರು ದುವಾಃಶೀರ್ವಚನ ನೀಡಿದರು.

ಹುಸೈನ್ ಮುಈನಿ ಸಖಾಫಿ ಮಾರ್ನಾಡ್ ಮುಖ್ಯ ಪ್ರಭಾಷಣ ನೀಡಿದರು. ಮಸೂದ್ ಸಹದಿ ಗಂಡಿಬಾಗಿಲು ಮುಹಿಯುದ್ದೀನ್ ಮಾಲೆ ಅಲಾಪಣೆ ಮಾಡಿದರು. ಕೆಮ್ಮಾರ ಮಸೀದಿ ಖತೀಬ್ ಅಬೂಬಕ್ಕರ್ ಸಖಾಫಿ ಪುರ್ಖಾನಿ ಸಂದರ್ಭೋಚಿತವಾಗಿ ಮಾತನಾಡಿದರು.
ಸಮಾರಂಭದಲ್ಲಿ ಕೆಮ್ಮಾರ ಮಸೀದಿ ಅಧ್ಯಕ್ಷ ರಶೀದ್ ಹಾಜಿ ಬಡ್ಡಮೆ, ಹಂಝ ಮುಸ್ಲಿಯಾರ್ ವಳಾಲು, ಅಬೂಬಕ್ಕರ್ ಮದನಿ ಬಡ್ಡಮೆ, ಜಿ.ಎಂ. ಕುಂಞ ಜೋಗಿಬೆಟ್ಟು, ಎಂ. ಎ. ರಜಾಕ್ ಬೊಲುಂಬುಡ, ಹಸೈನಾರ್ ಮುಸ್ಲಿಯಾರ್ ಗಂಡಿಬಾಗಿಲು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here