ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ – ರಾಮಕುಂಜದ ಶ್ರದ್ಧಾಗೆ ದ್ವಿತೀಯ ಸ್ಥಾನ

0

ರಾಮಕುಂಜ: ಬೆಂಗಳೂರಿನ ಉತ್ಥಾನ ಮಾಸಪತ್ರಿಕೆ ಏರ್ಪಡಿಸಿದ್ದ ರಾಜ್ಯಮಟ್ಟದ ಕಾಲೇಜು ವಿದ್ಯಾರ್ಥಿಗಳ “ಉತ್ಥಾನ’ ಪ್ರಬಂಧ ಸ್ಪರ್ಧೆ (2022)ಯಲ್ಲಿ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಶ್ರದ್ಧಾ ಯು.ಎಸ್. ಅವರು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

“ಭವಿಷ್ಯದಲ್ಲಿ ನಾನೇನಾಗಬೇಕು ? ಉದ್ಯೋಗದಾತನಾಗಲೇ ? ಉದ್ಯೋಗಿಯಾಗಲೇ” ಎಂಬ ವಿಷಯದಲ್ಲಿ ಬರೆದ ಇವರ ಪ್ರಬಂಧ ದ್ವಿತೀಯ ಬಹುಮಾನ ಹಾಗೂ 7 ಸಾವಿರ ರೂ., ನಗದು ಬಹುಮಾನ ಪಡೆದುಕೊಂಡಿದೆ ಎಂದು ಕಾಲೇಜಿನ ಪ್ರಾಂಶುಪಾಲ ಗಣರಾಜ್ ಕುಂಬ್ಳೆ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here