ಕೊಂಬೆಟ್ಟು ಪಿಲಿಭೂತ ದೈವಸ್ಥಾನದ ವಾರ್ಷಿಕ ಕಲಶಾಭಿಷೇಕಕ್ಕೆ ವಿದ್ಯಾರ್ಥಿಗಳಿಂದ ಹಸಿರುವಾಣಿ ಸಮರ್ಪಣೆ

0

ಪುತ್ತೂರು: ಜ.25ರಂದು ಕೊಂಬೆಟ್ಟು ಶ್ರೀ ವ್ಯಾಘ್ರಚಾಮುಂಡಿ (ಪಿಲಿಭೂತ) ದೈವಸ್ಥಾನದ ವಾರ್ಷಿಕ ಕಲಾಶಭಿಷೇಕ, ತಂಬಿಲ ಮತ್ತು ದೈವ ನರ್ತನ ಸೇವೆಯ ಅಂಗವಾಗಿ ಸ್ಥಳೀಯ ಶ್ರೀ ರಾಮಕೃಷ್ನ ಪ್ರೌಢಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕವೃಂದದವರಿಂದ ಜ.24ರಂದು ಹಸಿರುವಾಣಿ ಸಮರ್ಪಣೆ ಮಾಡಲಾಯಿತು.

ಧಾರ್ಮಿಕ ಕ್ಷೇತ್ರದ ಕಾರ್ಯಕ್ರಮಗಳಲ್ಲಿ ಹಸಿರುವಾಣಿ ಸಂಪ್ರದಾಯವಿದ್ದು, ವಿದ್ಯಾರ್ಥಿಗಳೇ ಸ್ವತಃ ಹಸಿರುವಾಣಿ ಸಮರ್ಪಣೆ ಮಾಡಿರುವುದು ಧಾರ್ಮಿಕ ಜಾಗೃತಿಗೆ ಮಾದರಿಯಾಗಿದೆ. ಶಾಲಾ ವಿದ್ಯಾರ್ಥಿಗಳು ಸೀಯಾಳ, ತೆಂಗಿನ ಕಾಯಿ, ಅಲಫಲವಸ್ತುಗಳನ್ನು ಮೆರವಣಿಗೆ ಮೂಲಕ ತಂದು ದೈವಸ್ಥಾನದಲ್ಲಿ ಸಮರ್ಪಣೆ ಮಾಡಿದರು.

LEAVE A REPLY

Please enter your comment!
Please enter your name here