ಸವಣೂರು ವಿದ್ಯಾರಶ್ಮಿಯಲ್ಲಿ ಮಹೇಶ್ ಬೆಟ್ಟಂಪಾಡಿಯವರಿಗೆ ಶ್ರದ್ಧಾಂಜಲಿ

0

ಪುತ್ತೂರು: ಸುಮಾರು 12 ವರ್ಷಗಳ ಕಾಲ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿದ್ದ ಮಹೇಶ್ ಬೆಟ್ಟಂಪಾಡಿ ಅವರಿಗೆ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಂಸ್ಥೆಯ ಸಂಚಾಲಕ ಸವಣೂರು ಸೀತಾರಾಮ ರೈಯವರು ಮಾತನಾಡಿ ಮೃತರ ಸೇವಾ ವೈಶಿಷ್ಟ್ಯಗಳನ್ನು ನೆನಪಿಸಿಕೊಂಡರು. ಸದಾಕಾಲ ಕ್ರಿಯಾಶೀಲರಾಗಿರುತ್ತಿದ್ದ ಅವರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಸಾಧಕರನ್ನಾಗಿ ಮಾಡುತ್ತಿದ್ದರು ಎಂದು ಉಲ್ಲೇಖಿಸಿದ ಅವರು ಸರ್ಕಾರಿ ಉದ್ಯೋಗ ಪಡೆದ ಪ್ರಯುಕ್ತ ವಿದ್ಯಾರಶ್ಮಿಯಿಂದ ಹೊರಹೋದ ಬಳಿಕವೂ ವಿದ್ಯಾರಶ್ಮಿಯನ್ನು ಸ್ಮರಿಸಿಕೊಳ್ಳುತಿದ್ದರು.

ಸಂಚಾಲಕರ ಜನ್ಮದಿನದ ಅಮೃತೋತ್ಸವ ಆಚರಣೆಯ ಪ್ರಯುಕ್ತವಾಗಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುತ್ತಿದ್ದ ಸಿಇಟಿ/ಜೆಇಇ/ನೀಟ್ ತರಬೇತಿಗಳನ್ನು ನೀಡುವ ಯೋಜನೆಯ ರೂವಾರಿಯಾಗಿದ್ದ ಮಹೇಶ್ ಅವರು ವಿದ್ಯಾರಶ್ಮಿಯ ಎಲ್ಲಾ ಕಾರ್ಯಕ್ರಮಗಳಿಗೂ ಜೊತೆಯಾಗಿರುತ್ತಿದ್ದರು ಎಂದು ಪ್ರಾಂಶುಪಾಲ ಸೀತಾರಾಮ ಕೇವಳ ನೆನಪಿಸಿಕೊಂಡರು. ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ಉಪಸ್ಥಿತರಿದ್ದರು. ಎಲ್ಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳ ಮೌನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

LEAVE A REPLY

Please enter your comment!
Please enter your name here