ಆದ್ಯ ಬ್ಯಾಗ್ಸ್ ಸಹ ಸಂಸ್ಥೆ ಆದ್ಯ ಗಿಫ್ಟ್ ಗ್ಯಾಲರಿ ಶುಭಾರಂಭ

0

ಪುತ್ತೂರು : ಕೆ ಎಸ್ ಆರ್ ಟಿ ಸಿ ವಾಣಿಜ್ಯ ಸಂಕೀರ್ಣ ಇದರ ನೆಲಮಹಡಿಯಲ್ಲಿ ಕಳೆದ 5 ವರುಷಗಳಿಂದ ಮಕ್ಕಳ ,ಯುವತಿಯರ ,ಮಹಿಳೆಯರ ಹಾಗೂ ಪುರುಷರ ಹಲವು ಬಗೆಯ ಬ್ರಾಂಡೆಡ್ ಬ್ಯಾಗ್ ಗಳ ಮಾರಾಟ ಮಳಿಗೆ , ಅಶೋಕ್ ರಾವ್ ಬಪ್ಪಳಿಗೆ ಇವರ ಮಾಲೀಕತ್ವದ ಆದ್ಯ ಬ್ಯಾಗ್ಸ್ ಇದರ ಸಹ ಸಂಸ್ಥೆ ಆದ್ಯ ಗಿಫ್ಟ್ ಗ್ಯಾಲರಿ ಫೆ. 9 ರ ಬೆಳಗ್ಗೆ ,ಮಾತೃಸಂಸ್ಥೆ ಇದರ ಪಕ್ಕದಲ್ಲೇ ಶುಭಾರಂಭಗೊಂಡಿತು.

ಮಾಲೀಕರ ಸಹೋದರಿ ಅನಿತಾ ರವಿಶಂಕರ್ ದುಬೈ ಇವರು ಉದ್ಘಾಟನೆಯನ್ನು ನೆರವೇರಿಸಿ, ನೂತನ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಹಾರೈಸಿದರು. ಶೋಭಾ ಸುರೇಶ್ ಶೆಣೈ ದಂಪತಿ ದೀಪ ಪ್ರಜ್ವಲನೆಗೈದರು. ಜೋಸ್ ಅಲುಕ್ಕಾಸ್ ಮ್ಯಾನೇಜರ್ ರವೀಶ್ ,ಪ್ರಹ್ಲಾದ್ ಬೆಳ್ಳಿಪ್ಪಾಡಿ ,ನಗರಸಭಾ ಸದಸ್ಯ ರಿಯಾಜ್ ಪರ್ಲಡ್ಕ , ಸಹೋದರ ಭರತ್ ರಾವ್ ,ನಂದಿನಿ ಭರತ್ ದಂಪತಿ ಹಾಗೂ ನೇಹಾ ರಾವ್ ,ಅಹಾನ್ ರಾವ್ ಪ್ರದ್ಯುನ್ ರಾವ್ ಹಾಗೂ ಶೈಲಜಾ ಹೇಮನಾಥ್ ಕುಂಬ್ಳೆ ,ಪ್ರಕಾಶ್ ಪುರುಷರಕಟ್ಟೆ ,ರೀಗಲ್ ಶರೀಫ್ ,ಸಂಜು ಬನ್ನೂರು ,ಮನ್ಸೂರ್ ಪೆರ್ಲ ,ಅಶ್ವಿನಿ ರಾಘವೇಂದ್ರ ಶೆಣೈ ದಂಪತಿ ಬನ್ನೂರು ,ಮೌಸಿನ್ ದುಬೈ ,ಆದಿಲ್ ಹಾಗೂ ಆಫಿಲ್ ,ರಾಜೇಶ್ ಹೆಗ್ಡೆ ಉರ್ಲಾಂಡಿ ,ಕೆಎಲ್ 14 ನವಾಝ್ ,ಸತ್ತಾರ್ ಇವಾ ,ಬ್ರ್ಯಾಂಡ್ ಬಾಯ್ ಬಾತಿ ಅನೇಕರು ಉಪಸ್ಥಿತರಿದ್ದರು.

ಮಾಲಕ ಅಶೋಕ್ ರಾವ್ ಮಾತನಾಡಿ , ತಮ್ಮ ಪ್ರೀತಿಪಾತ್ರರ ಹುಟ್ಟು ಹಬ್ಬಕ್ಕೆ ನೀಡಬಹುದಾದ ಚೆಂದದ ಉಡುಗೊರೆಗಳ ಜೊತೆಗೆ ಮದುವೆ ಹಾಗೂ ಇತರ ಶುಭಕಾರ್ಯ ಗಳಿಗೂ ಕೊಡುವಂಥಹ ಅದ್ಬುತ ಮಾದರಿಯ , ಗುಣಮಟ್ಟದ ಉಡುಗೊರೆಗಳು ಊಹಿಸಲಾಸಧ್ಯವಾದ ಬೆಲೆಯಲ್ಲಿ ಸಿಗಲಿದ್ದು , ಶುಭಾರಂಭದ ಸಲುವಾಗಿ ಒಂದು ತಿಂಗಳವರೆಗೆ ಪ್ರತಿ ಖರೀದಿಯಲ್ಲೂ ಸುಮಾರು 25% ರಿಯಾಯಿತಿ ಸಿಗಲಿದೆಯೆಂದು ಹೇಳಿ ,ಸಹಕಾರ ಕೋರಿದರು. ಮೃದುಲಾ ಅಶೋಕ್ ಬಪ್ಪಳಿಗೆ ,ಅಧ್ಯ ಮತ್ತು ಆರ್ಯ ವಂದಿಸಿದರು. ಧ್ರುವ ರವಿಶಂಕರ್ ದುಬೈ ಸಹಕರಿಸಿದರು.

LEAVE A REPLY

Please enter your comment!
Please enter your name here