ಫೆ.23: ಶ್ರಿಶಾರದಾಂಬಾ ವಿವಿಧೋದ್ಧೇಶ ಸೇವಾ ಸಹಕಾರ ಸಂಘದ ಕಡಬ ಶಾಖೆ ಉದ್ಘಾಟನೆ

0

ಪುತ್ತೂರು: ಪುತ್ತೂರು ರಾಮನಾಥ ಛೇಂಬರ್‍ಸ್‌ನಲ್ಲಿ ಪ್ರಧಾನ ಕಛೇರಿ ಹೊಂದಿರುವ ಶ್ರಿಶಾರದಾಂಬಾ ವಿವಿಧೋದ್ಧೇಶ ಸೇವಾ ಸಹಕಾರ ಸಂಘದ ಪ್ರಥಮ ಶಾಖೆಯು ಫೆ.23ರಂದು ಕಡಬ ಶಾಲೋಮ್ ಟವರ್‍ಸ್‌ನಲ್ಲಿ ಶುಭಾರಂಭಗೊಳ್ಳಲಿದೆ.

ಶಾಖೆ ಉದ್ಘಾಟನಾ ಸಮಾರಂಭವನ್ನು ಶಾಲೋಮ್ ಟವರ್‍ಸ್‌ನ ಮಾಲಕ ಅಲೆಕ್ಸ್ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಡಬ ಶಾಖಾ ಪ್ರಬಂಧಕ ಅಹಮ್ಮದ್ ಮಸೂರ್, ಕಡಬ ಗಣೇಶ್ ಕಟ್ಟಡದ ಮಾಲಕ ಸುಂದರ ಗೌಡ ಮಂಡೆಕರ ಮತ್ತು ಕಡಬ ಶ್ರೀದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಅಧ್ಯಕ್ಷ ಸೀತಾರಾಮ ಗೌಡ ಹೊಸವಳಿಕೆ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ

LEAVE A REPLY

Please enter your comment!
Please enter your name here