ಮಂಗಳೂರಿನ ಐಸಿರಿ ಹರ್ಬಲ್ ಮುಖ್ಯಸ್ಥ ದರ್ಶನ್ ಜೈನ್ ‘ಉಜ್ವಲ್ ಉದ್ಯಮಿ’ ಪ್ರಶಸ್ತಿಗೆ ಆಯ್ಕೆ

0

ವಿಟ್ಲ: ಮಂಗಳೂರಿನ ಐಸಿರಿ ಹರ್ಬಲ್ ಮುಖ್ಯಸ್ಥ ದರ್ಶನ್ ಜೈನ್ ರವರು ಏಷ್ಯಾನೆಟ್ ಸುವರ್ಣ ಮತ್ತು ಕನ್ನಡ ಪ್ರಭದಿಂದ ಕೊಡಲ್ಪಡುವ ಉಜ್ವಲ್ ಉದ್ಯಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕಳೆದ ಹದಿನೆಂಟು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಆರಂಭವಾಗಿರುವ ಐಸಿರಿ ಹರ್ಬಲ್ಸ್ ರಾಜ್ಯದೆಲ್ಲಡೆ ಹೆಸರುವಾಸಿಯಾಗಿ, ಜನಮೆಚ್ಚುಗೆ ಗಳಿಸಿದೆ. ಈ ನಿಟ್ಟಿನಲ್ಲಿ 2023 ನೇ ಸಾಲಿನ ಏಷ್ಯಾನೆಟ್ ನ್ಯೂಸ್ ಹಾಗೂ ಕನ್ನಡಪ್ರಭ ವತಿಯಿಂದ ಕೊಡಲ್ಪಡುವ ಪ್ರಶಸ್ತಿಗೆ ದರ್ಶನ್ ಜೈನ್ ಆಯ್ಕೆಯಾಗಿದ್ದಾರೆ.

ಮಾ.24ರಂದು ಮಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ. ಮಂಗಳೂರು ಮೂಲದ ದರ್ಶನ್ ಜೈನ್‌ ರವರು ವಿಟ್ಲದಲ್ಲಿ ಉದ್ಯಮಿಯಾಗಿದ್ದಾರೆ.

LEAVE A REPLY

Please enter your comment!
Please enter your name here