ನಿಡ್ಪಳ್ಳಿ ಗುರಿಬಾರಿಕೆ ಧರ್ಮಚಾವಡಿಯ ದೈವಗಳಿಗೆ ಧರ್ಮನಡಾವಳಿ ಸಂಪನ್ನ 

0

ನಿಡ್ಪಳ್ಳಿ; ನಿಡ್ಪಳ್ಳಿ ಗುರಿಬಾರಿಕೆ ಧರ್ಮಚಾವಡಿಯಲ್ಲಿ ಶ್ರೀ ಕ್ಷೇತ್ರದ ಪರಮ ಸಾತ್ವಿಕ ಸತ್ಯಗಳ ಧರ್ಮನಡಾವಳಿ ಉತ್ಸವವು ಶ್ರೀಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ಸುಬ್ರಹ್ಮಣ್ಯ ಬಳ್ಳಕ್ಕುರಾಯರ ವೈದಿಕತ್ವದಲ್ಲಿ, ನಿಡ್ಪಳ್ಳಿ ಸಾರಾಳ ಪಟ್ಟದ ಅರಸರ ಗೌರವ ಉಪಸ್ಥಿತಿಯಲ್ಲಿ, ಮನ್ಮಥ ಶೆಟ್ಟಿಯವರ ದೈವ ಮಧ್ಯಸ್ಥಿಕೆಯಲ್ಲಿ ಮತ್ತು ಪ್ರದೇಶದ ಹನ್ನೆರಡು ತರವಾಡು ಮನೆಯವರ, ಗುರಿಬಾರಿಕೆ ಕುಟುಂಬಸ್ಥರ ಮತ್ತು ಹೊಸಮನೆಯವರ ಸಹಕಾರದೊಂದಿಗೆ ಧರ್ಮಚಾವಡಿಯ ಯಜಮಾನರಾದ  ರಾಧಾಕೃಷ್ಣ  ಬಳ್ಳಡ್ಕ ರಾಮಣ್ಣ ರೈ ಯವರ ಮತ್ತು ಆಡಳಿತ ಸಮಿತಿಯ ಮುಂದಾಳತ್ವದಲ್ಲಿ ದೈವಗಳಿಗೆ ಧರ್ಮ ನಡಾವಳಿ ಮಾ.25 ರಂದು ನಡೆಯಿತು.

    ರಾತ್ರಿ ಭಂಡಾರ ತೆಗೆದು ಕೊರತಿ ಮತ್ತು ಕಲ್ಲುರ್ಟಿ ದೈವಕ್ಕೆ ನೆಮೋತ್ಸವ ನಡೆಯಿತು. ನಂತರ ಧರ್ಮದೈವ ವರ್ಣರ ಪಂಜುರ್ಲಿ ದೈವದ ನೆಮೋತ್ಸವ, ದೈವರಾಜ ರಾವು ಮತ್ತು ದೈವರಾಜ ಗುಳಿಗ ದೈವಗಳಿಗೆ ನೆಮೋತ್ಸವ ನಡೆದು ಪ್ರಸಾದ ವಿತರಣೆ ನಡೆಯಿತು. ರಾತ್ರಿ ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here