ಬ್ರಹ್ಮರಥೋತ್ಸವದಂದು ವಕೀಲರ ಸಂಘದಿಂದ ಉಚಿತ ಕುಡಿಯುವ ನೀರಿನ ವಿತರಣೆ

0

ಪುತ್ತೂರು:ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥೋತ್ಸವದ ದಿನ ಏ.17ರಂದು ಪ್ರತಿ ವರ್ಷದಂತೆ ಪುತ್ತೂರು ವಕೀಲರ ಸಂಘದಿಂದ ಭಕ್ತರಿಗೆ ಉಚಿತವಾಗಿ ಕುಡಿಯುವ ನೀರಿನ ವಿತರಣೆ ಕಾರ್ಯಕ್ರಮ ಉದ್ಘಾಟನೆಗೊಂಡಿತು.

ನ್ಯಾಯಾಧೀಶ ಗೌಡ ಆರ್.ಪಿ ಅವರು ಕುಡಿಯುವ ನೀರನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರಿಗೆ ನೀಡುವ ಮೂಲಕ ಉದ್ಘಾಟಿಸಿದರು. ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ.ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಮಾಜಿ ಅಧ್ಯಕ್ಷ ಭಾಸ್ಕರ್ ಕೋಡಿ೦ಬಾಳ ಉಚಿತ ನೀರು ವಿತರಣೆ ಕಾರ್ಯಕ್ರಮ ಪ್ರಾರಂಭದ ದಿನಗಳನ್ನು ನೆನೆಸಿದರು.

ನ್ಯಾಯಾಧೀಶೆ ಅರ್ಚನ ಉನ್ನಿತಾನ್, ಬಾಲಕೃಷ್ಣ ನಾಯಕ್, ಗೋಪಾಲಕೃಷ್ಣ ಭಟ್ ಶುಭ ಹಾರೈಸಿದರು. ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಎಚ್. ಅವರು ಉಪಸ್ಥಿತರಿದ್ದರು. ವಕೀಲರ ಸಂಘದ ಖಜಾಂಚಿ ಶ್ಯಾಮ್‌ಪ್ರಸಾದ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಚಿನ್ಮಯ್ ರೈ ವಂದಿಸಿದರು.

LEAVE A REPLY

Please enter your comment!
Please enter your name here