ಕೇಪು ಬಿಜೆಪಿ ಶಕ್ತಿ ಕೇಂದ್ರದಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆ

0

ಪುತ್ತೂರು: ಕೇಪು ಬಿಜೆಪಿ ಶಕ್ತೀ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೇಸ್ ಕೇಪು ವಲಯ ಕಾರ್ಯದರ್ಶಿ ಧನಂಜಯ ಹಾಗೂ ಕಾಂಗ್ರೇಸ್ ಕಾರ್ಯಕರ್ತರಾದ ರವಿ ಕೊರತಿಗದ್ದೆ, ನಿತಿನ್, ನವೀನ್, ಲೋಕೇಶ್, ಸೃಜನ್, ನಿಖಿಲ್ ಮೊದಲಾದವರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಹಾಗೂ ರಾಷ್ಟ್ರೀಯ ಮಹಿಳಾ ಮೋರ್ಚ ಕಾರ್ಯಕಾರಿಣಿ ಸದಸ್ಯೆ ಬಿಂದು ಸುರೇಶ್ ನೇತೃತ್ವದಲ್ಲಿ ಬಿಜೆಪಿ ಸೇರಿದರು.


ಈ ಸಂದರ್ಭದಲ್ಲಿ ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಕೇಪು ಶಕ್ತಿ ಕೇಂದ್ರ ಸಂಚಾಲಕ ರಾಧಕೃಷ್ಣ ಶೆಟ್ಟಿ, ಕೇಪು ಪಂಚಾಯತು ಉಪಾಧ್ಯಕ್ಷ ರಾಘವ ಸಾರಡ್ಕ, ಪಂಚಾಯತು ಸದಸ್ಯರಾದ ಪುರುಷೋತ್ತಮ ಕಲ್ಲಂಗಳ, ಪಕ್ಷದ ಪ್ರಮುಖರಾದ ತಾರಾನಾಥ ಆಳ್ವ, ಬೂತ್ ಅಧ್ಯಕ್ಷ ಅಶೋಕ್, ಪ್ರಮುಖರಾದ ಉಮೇಶ್ ಗೌಡ, ಶ್ರೀಕೃಷ್ಣ ಮಣಿಯಾಣಿ, ಚಂದ್ರಶೇಖರ್ ಮೊದಲಾದ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here