ಈಶ್ವರಮಂಗಲ: ಆಮ್ ಆದ್ಮಿ ಪಾರ್ಟಿಯಿಂದ ಚುನಾವಣಾ ಪ್ರಚಾರ

0

ನಿಮ್ಮ ಸೇವೆ ಮಾಡಲು ನನಗೊಂದು ಅವಕಾಶ ಕೊಡಿ-ಡಾ. ವಿಶು ಕುಮಾರ್ 

ಪುತ್ತೂರು: ಆಮ್ ಆದ್ಮಿ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರದ ಈಶ್ವರಮಂಗಲದಲ್ಲಿ ಡಾ. ವಿಶುಕುಮಾರ್ ಗೌಡ ಪರವಾಗಿ ಪಕ್ಷದ ಮತ ಪ್ರಚಾರದ ಸಭೆಯನ್ನು ಮಾಡಲಾಯಿತು. ಆಮ್ ಆದ್ಮಿ ಪಕ್ಷ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪುರುಷೋತ್ತಮ ಗೌಡ ಕೋಲ್ಪೆ ಮಾತನಾಡಿ ಆಮ್ ಆದ್ಮಿ ಪಕ್ಷ ಜನ ಸಾಮಾನ್ಯರ ಪಕ್ಷ, ಭ್ರಷ್ಟಾಚಾರ ರಹಿತ ಪುತ್ತೂರಿನ ಆಡಳಿತದ ಕನಸು ಕಾಣುವ ಪ್ರತಿಯೊಬ್ಬರೂ ಡಾ. ವಿಶುಕುಮಾರ್ ಅವರಿಗೆ ಮತ ನೀಡಿ ಎಂದು ಹೇಳಿದರು.

ಅಭ್ಯರ್ಥಿ ಡಾ.ವಿಶುಕುಮಾರ್ ಮಾತನಾಡಿ ಮುಂದಿನ ಐದು ವರ್ಷ ನನಗೆ ಅಧಿಕಾರ ನೀಡಿ ಪುತ್ತೂರಿನ ಪ್ರತಿಯೊಬ್ಬ ಕೃಷಿಕನ ಮತ್ತು ಬಡವರ ಮನೆ ಮಗನಾಗಿ ನಿಮ್ಮ ಸೇವೆ ಮಾಡುತ್ತೇನೆ ಎಂದು ಹೇಳಿದರು. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು  ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here