ಬೊಳುವಾರಿನಲ್ಲಿ ಆಂಜನೇಯ ಯಕ್ಷಗಾನದಿಂದ ಪಾಕ್ಷಿಕ ಯಕ್ಷಗಾನ ತಾಳಮದ್ದಳೆ

0

ಪುತ್ತೂರು : ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಪಾಕ್ಷಿಕ ತಾಳಮದ್ದಳೆ “ಸುಧನ್ವ ಮೋಕ್ಷ” ಶ್ರೀ ಆಂಜನೇಯ ಮಂತ್ರಾಲಯದಲ್ಲಿ ಎ.30ರಂದು ಸಂಜೆ ನಡೆಯಿತು.


ಹಿಮ್ಮೇಳದಲ್ಲಿ ಕುಸುಮಾಕರ ಆಚಾರ್ಯ ಹಳೆನೇರೆಂಕಿ, ಮುರಳೀಧರ ಕಲ್ಲೂರಾಯ, ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಸಹಕರಿಸಿದರು. ಮುಮ್ಮೇಳದಲ್ಲಿ ಸುಧನ್ವ (ಭಾಸ್ಕರ್ ಬಾರ್ಯ ಮತ್ತು ಗುಂಡ್ಯಡ್ಕ ಈಶ್ವರ ಭಟ್), ಅರ್ಜುನ (ಗುಡ್ಡಪ್ಪ ಬಲ್ಯ), ಕೃಷ್ಣ (ತಾರಾನಾಥ ಸವಣೂರು), ಹಂಸ ಧ್ವಜ (ಬಡೆಕ್ಕಿಲ ಚಂದ್ರಶೇಖರ ಭಟ್), ಪ್ರಭಾವತಿ (ಕು೦ಬ್ಳೆ ಶ್ರೀಧರ್ ರಾವ್) ಸಹಕರಿಸಿದರು. ಬನ್ನೂರು ಗೋಪಾಲ್ ಭಟ್ ಪ್ರಾಯೋಜಿಸಿದ್ದರು. ಟಿ ರಂಗನಾಥ ರಾವ್ ಸಹಕರಿಸಿದರು.

LEAVE A REPLY

Please enter your comment!
Please enter your name here