ಜೆಡಿಎಸ್ ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ಲ ಕೆದುವಡ್ಕ ರಾಜಿನಾಮೆ

0

ಪುತ್ತೂರು: ಜೆಡಿಎಸ್ ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಕೆದುವಡ್ಕ ರಾಜಿನಾಮೆ ನೀಡಿದ್ದಾರೆ.
ಅವರು ತನ್ನ ರಾಜಿನಾಮೆ ಪತ್ರವನ್ನು ಜೆಡಿಎಸ್ ನ ಶಂಶುಲ್ಲಾ ಖಾನ್ ರಿಗೆ ಕಳುಹಿಸಿದ್ದಾರೆ.


ನಾನು ಕಳೆದ 33 ವರ್ಷಗಳಿಂದ ಜಾತ್ಯಾತೀತ ಜನತಾ ದಳ ಇದರ ಸಕ್ರಿಯ ಕಾರ್ಯಕರ್ತನಾಗಿದ್ದು, ಈಗ ಪುತ್ತೂರು ತಾಲೂಕು ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನಾನು ಅಲ್ಪಸಂಖ್ಯಾತ ಘಟಕದಲ್ಲಿ ಇದ್ದ ಕಾರಣ ವಾಟ್ಸ್ ಅಫ್‌ನಲ್ಲಿ ಕೂಡಾ ನಾನು ಪ್ರಚಾರವನ್ನು ಮಾಡುತ್ತಿದ್ದೆ. ಈ ಭಾರಿ ನಡೆದ ಚುನಾವಣೆಯಲ್ಲಿ ಫಲಿತಾಂಶದಿಂದಾಗಿ ತುಂಬಾ ನೊಂದಿರುತ್ತೇನೆ. ಆದ್ದರಿಂದ ನಾನು ತಾಲೂಕು ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸುತ್ತಿದ್ದೇನೆ. ತಾವು ನನ್ನ ರಾಜೀನಾಮೆಯನ್ನು ಅಂಗೀಕರಿಸಬೇಕಾಗಿ ವಿನಂತಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

LEAVE A REPLY

Please enter your comment!
Please enter your name here