9 ವರ್ಷಗಳ ಹಿಂದೆ ನಡೆದ ಅಪಘಾತ ಪ್ರಕರಣ-ಆರೋಪಿ ಟ್ಯಾಂಕರ್ ಚಾಲಕ ಖುಲಾಸೆ

0

ಪುತ್ತೂರು: 9 ವರ್ಷಗಳ ಹಿಂದೆ ಹಿರ್ತಡ್ಕದಲ್ಲಿ ನಡೆದ ಟ್ಯಾಂಕರ್ ಅಪಘಾತದಿಂದ ಬಾಲಕ ಮೃತಪಟ್ಟ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ಟ್ಯಾಂಕರ್ ಚಾಲಕನನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.

2014ರ ಜು.5ಕ್ಕೆ ಆರೋಪಿ ಚಾಲಕ ಮುತ್ತುವೇಲು ಅವರು ಚಲಾಯಿಸುತ್ತಿದ್ದ ಟ್ಯಾಂಕರ್ ಉಪ್ಪಿನಂಗಡಿ ಗ್ರಾಮದ ಹಿರ್ತಡ್ಕ ಅಜಾದ್ ನಗರ ಎಂಬಲ್ಲಿ ಎಂಟು ವರ್ಷದ ಬಾಲಕ ಮೊಹಮ್ಮದ್ ಅಸ್ಲಾಂ ಎಂಬವರಿಗೆ ಡಿಕ್ಕಿಯಾಗಿತ್ತು. ಡಿಕ್ಕಿಯ ರಭಸಕ್ಕೆ ಬಾಲಕ ಮೊಹಮ್ಮದ್ ಅಸ್ಲಾಂ ಅವರು ಮೃತಪಟ್ಟಿದ್ದರು. ಪೊಲೀಸರು ಆರೋಪಿ ಚಾಲಕ ಮುತ್ತುವೇಲು ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ. ಆರೋಪಿ ಪರ ವಕೀಲರಾದ ಮಾಧವ ಪೂಜಾರಿ, ರಾಕೇಶ್, ಮೋಹಿನಿ, ನಿಶಾ ವಾದಿಸಿದ್ದರು.

LEAVE A REPLY

Please enter your comment!
Please enter your name here