ಮಹಾಲಿಂಗೇಶ್ವರನ ನಡೆಗೆ ಅರುಣ್‌ ಕುಮಾರ್ ಪುತ್ತಿಲ ಮತ್ತು ಕಾರ್ಯಕರ್ತರಿಂದ ಸೇವಾ ಸಮರ್ಪಣಾ ನಡಿಗೆ

0

ಪುತ್ತೂರು: ಮತದಾರರಿಗೆ ಕೃತಜ್ಙತೆ ಮತ್ತು ಚುನಾವಣೆ ಸಂದರ್ಭದಲ್ಲಿ ಶಕ್ತಿ ನೀಡಿದ ದೇವರಿಗೆ ವಂದನೆ ಸಲ್ಲಿಸುವ ನಿಟ್ಟಿನಲ್ಲಿ ಆಯೋಜಿಸಲಾದ “ನಮ್ಮ ನಡಿಗೆ ಮಹಲಿಂಗೇಶ್ವರನ ನಡೆಗೆ” ಆರಂಭ ದೊರಕಿದೆ. ದರ್ಬೆಯಲ್ಲಿ ಅಶ್ವಥ ಕಟ್ಟೆಗೆ ನಮಸ್ಕರಿಸಿದ ಅರುಣ್ ಪುತ್ತಿಲರವರು ‘ಪುತ್ತೂರು ಮಹಾಲಿಂಗೇಶ್ವರ ದೇವರಿಗೆ ಗೋವಿಂದಾ’ ಹಾಕುವುದರ ಮೂಲಕ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿದರು.

ಪಾದಯಾತ್ರೆ ವೇಳೆ ಭಜನೆ, ʼಓಂ ನಮಃ ಶಿವಾಯ ಮಂತ್ರಕ್ಕಷ್ಟೆ ಅವಕಾಶ ನೀಡಲಾಗಿದ್ದು ದರ್ಬೆಯಿಂದ ಮಹಾಲಿಂಗೇಶ್ವರನ ಸನ್ನಿಧಿಯವರೆಗು ಪುತ್ತಿಲ ಮತ್ತು ಕಾರ್ಯಕರ್ತರನೇಕರು ಬರಿಗಾಲಲ್ಲಿ ಹೆಜ್ಜೆ ಹಾಕಿದರು. ದೇವಸ್ಥಾನಕ್ಕೆ ತಲುಪಿ ಶ್ರೀ ಮಹಾಲಿಂಗೇಶ್ವರ ದರ್ಶನ ಪಡೆದರು.

ದೇವಾಲಯದ ರಥಬೀದಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವುದರೊಂದಿಗೆ ಮುಂದಿನ 5 ವರ್ಷಗಳ ಕಾರ್ಯ ಚಟುವಟಿಕೆಗಳ ವಿವರವನ್ನು ಸಮಾವೇಶದಲ್ಲಿ‌ ಅರುಣ್‌ ಕುಮಾರ್ ಪುತ್ತಿಲ ಬಿಚ್ಚಿಡಲಿದ್ದಾರೆ.

LEAVE A REPLY

Please enter your comment!
Please enter your name here