ಸಾಲೆತ್ತೂರಿನಲ್ಲಿ ಅಕ್ರಮ ಗೋ ಸಾಗಾಟ- ಹಿಂದೂ ಜಾಗರಣ ವೇದಿಕೆ ಕಾರ್ಯಾಚರಣೆ

0

ಪುತ್ತೂರು: ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ ಘಟನೆ ವಿಟ್ಲ ಸಮೀಪದ ಸಾಲೆತ್ತೂರು ಎಂಬಲ್ಲಿ ನಡೆದಿದೆ.ಅಕ್ರಮ ಗೋ ಸಾಗಾಟದ ಬಗ್ಗೆ ಮಾಹಿತಿ ಮೇರೆಗೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿ 2 ಗೋವುಗಳನ್ನು ರಕ್ಷಿಸಿದ್ದಾರೆ.

ರೋಷನ್ ಡಿಸೋಜ ಎಂಬಾತ ತನ್ನ ಪಿಕಪ್‌ ವಾಹನದಲ್ಲಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದು,ವಿಚಾರಣೆ ವೇಳೆ ಕಿರಣ್‌ ಪೂಜಾರಿ ಎಂಬವರಿಗೆ ಕಂಬಳದ ಕೋಣ ಸಾಗಿಸುತ್ತಿರುವುದಾಗಿ ಹೇಳಿದ್ದಾರೆ.ಹಿಜಾವೇ ಕಾರ್ಯಕರ್ತರು ಕಿರಣ್‌ ಪೂಜಾರಿಯನ್ನು ಸಂಪರ್ಕಿಸಿದಾಗ ಅಕ್ರಮವಾಗಿ ಗೋ ಸಾಗಾಟ ಮಾಡುವ ವಿಚಾರ ತಿಳಿದುಬಂದಿದೆ. ಹಿಜಾವೇ ಕಾರ್ಯಕರ್ತರು ನೀಡಿದ ಮಾಹಿತಿಯ ಮೇರೆಗೆ ಸ್ಥಳಕ್ಕಾಗಮಿಸಿದ ವಿಟ್ಲ ಪೊಲೀಸರು 2 ಗೋವು ಮತ್ತು ವಾಹನವನ್ನು ವಾಸಕ್ಕೆ ಪಡೆದಿದ್ದಾರೆ.



LEAVE A REPLY

Please enter your comment!
Please enter your name here