ಗೇರು ಸಂಶೋಧನಾ ನಿರ್ದೇಶನಾಲಯದ ನಿವೃತ್ತ ತಾಂತ್ರಿಕ ಅಧಿಕಾರಿ ಸೀತಾರಾಮ ಪ್ರಭು ಕಲ್ಕಾರುರವರಿಗೆ ಶ್ರದ್ಧಾಂಜಲಿ

0

ಪುತ್ತೂರು: ಮೇ 13 ರಂದು ನಿಧನರಾದ ಗೇರು ಸಂಶೋಧನಾ ನಿರ್ದೇಶನಾಲಯದ ನಿವೃತ್ತ ತಾಂತ್ರಿಕ ಅಧಿಕಾರಿ


ಸೀತಾರಾಮ ಪ್ರಭು ಕಲ್ಕಾರುರವರ ವೈಕುಂಠ ಸಮಾರಾಧನೆಯು ಮೇ 25 ರಂದು ಪುತ್ತೂರು ಶ್ರೀ ಮಹಮ್ಮಾಯಿ ದೇವಸ್ಥಾನದ ಸಭಾಭವನದಲ್ಲಿ ಜರಗಿತು.

ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಭೆ ಜರಗಿತು. ಶಿವರಾಯ ಭಟ್ ವಾಮುದಪದವು ಪ್ರಾಸ್ತಾವಿಕವಾಗಿ ಮಾತನಾಡಿದರು. ಮೊಟ್ಟೆತಡ್ಕ ಡಿಸಿಆರ್ ಸಂಸ್ಥೆಯ ಡಾ.ದಿನಕರ್ ಅಡಿಗ, ಡಾ.ರವಿಪ್ರಕಾಶ್, ಭೋಜಪ್ಪ ಗೌಡ, ಮುರಳಿಕೃಷ್ಣರವರುಗಳು ನುಡಿನಮನ ಸಲ್ಲಿಸಿದರು.

ಸಮಾರಂಭದಲ್ಲಿ ಪುತ್ತೂರು ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಕಲ್ಲೇಗ, ವಿಟ್ಲ ಸಿಪಿಸಿಆರ್‌ನ ಆನಂದ ಗೌಡ, ಪುತ್ತೂರು ತಾ.ಪಂ. ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ನಾರಾವಿ, ಪ್ರಮುಖರಾದ ಸಂಜೀವ ನಾಯಕ್ ಕಲ್ಲೇಗ, ಮುರಳಿಕೃಷ್ಣ ಹಸಂತಡ್ಕ, ಪ್ರಸಾದ್ ಮಯ್ಯ,ಉಪ್ಪಿನಂಗಡಿ ಯೂನಿಯನ್ ಬ್ಯಾಂಕ್ ಮೇನೇಜರ್ ನಾಗರಾಜ್, ಪುತ್ತೂರು ಅಶ್ವಿನಿ ಸೌಹಾರ್ದ ಸಹಕಾರ ಸಂಘದ ಸಿಬ್ಭಂಧಿಗಳು ಸಹಿತ 300ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು.

ಸೀತಾರಾಮ ಪ್ರಭುರವರ ಪುತ್ರಿಯರಾದ ರೂಪ ಮಹೇಶ್ ನಾಯಕ್ ಮರಮ್ಮ, ದೀಪಾ ರಾಜಾರಾಮ್ ಪ್ರಭು ಪುತ್ತೂರು, ದಿವ್ಯ ಮಹೇಶ್ ನಾಯಕ್ ಸೌದಿ, ಅಳಿಯಂದಿರಾದ ಮಹೇಶ್ ನಾಯಕ್ ಮರಮ್ಮ, ರಾಜಾರಾಮ್ ಪ್ರಭು ಪುತ್ತೂರು, ಮಹೇಶ್ ನಾಯಕ್ ಸೌದಿ(ಒಡ್ಡೂರು) ಮೊಮ್ಮಕ್ಕಳಾದ ಶ್ರೇಯಾಸ್ ನಾಯಕ್, ಧೃತಿ ಪ್ರಭು, ಮೌರ್ಯ ನಾಯಕ್, ಅಶ್ವಿನ್ ಪ್ರಭು, ಧ್ರುವ ನಾಯಕ್, ಸಹೋದರರಾದ ನರಸಿಂಹ ಪ್ರಭು ಕಲ್ಕಾರು, ಗೋಪಾಲಕೃಷ್ಣ ಪ್ರಭು ಕಲ್ಕಾರು, ಸಹೋದರಿಯರಾದ ರತ್ನಾ ನಾಯಕ್, ಚಂದ್ರಾವತಿ ನಾಯಕ್, ಕಮಲಾ ನಾಗೇಶ್ ನಾಗೇಶ್ ಪ್ರಭು ಸಹಿತ ಬಂಧುಗಳು ಊರ-ಪರವೂರ ಹಿತೈಷಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here