ಆಲಂಕಾರು ಶ್ರೀಭಾರತಿ ಇಂಗ್ಲೀಷ್ ಮಾಧ್ಯಮ ಶಾಲೆ ಉದ್ಘಾಟನೆ

0

ಶಿಕ್ಷಣ ಸಂಸ್ಥೆಗಳು ಸಮಾಜದ ಆಸ್ತಿ – ಡಾ.ಎಂ.ಬಿ ಪುರಾಣಿಕ್

ಆಲಂಕಾರು: ಆಲಂಕಾರು ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಭಾರತಿ ಇಂಗ್ಲೀಷ್ ಮಾಧ್ಯಮ ಉದ್ಘಾಟನೆಗೊಂಡಿತು. ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಶುಭಾಹಾರೈಸಿದ ನಂತರ ಸಭಾ ಕಾರ್ಯಕ್ರಮ ನಡೆಯಿತು. ಮಂಗಳೂರು ಶಾರಾದಾ ಗ್ರೂಪ್ ಆಫ್ ಇನ್ಸ್‌ಸ್ಟಿಟ್ಯೂಷನ್ ಅಧ್ಯಕ್ಷ ಡಾ. ಎಂ.ಬಿ ಪುರಾಣಿಕ್ ಶ್ರೀ ಭಾರತಿ ಇಂಗ್ಲೀಷ್ ಮಾಧ್ಯಮ ವಿಭಾಗ ಉದ್ಘಾಟನೆ ಮಾಡಿ ಮಾತನಾಡಿ, ದ.ಕ ಜಿಲ್ಲೆ ಶಿಕ್ಷಣಕ್ಕೆ ಹೆಸರುವಾಸಿಯಾದ ಜಿಲ್ಲೆ. ಶಿಕ್ಷಣ ಸಂಸ್ಥೆಗಳು ಸಮಾಜದ ಆಸ್ತಿ ಇದ್ದಂತೆ. ಕೋವಿಡ್‌ನಿಂದಾಗಿ ಶಿಕ್ಷಣ ಸಂಸ್ಥೆಗಳು ಆರ್ಥಿಕ ಸಂಕಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿತ್ತು. ಈ ಸಂಕಷ್ಟವನ್ನು ಸಮಾಜ ಸಧೃಡವಾಗಿ ನಿಭಾಯಿಸಬೇಕು. ಆಲಂಕಾರು ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮವನ್ನು ಪ್ರಾರಂಭಿಸಿದ್ದು ಸಂತೋಷದ ವಿಚಾರವಾಗಿದೆ. ಗ್ರಾಮೀಣ ಭಾಗದ ಜನರು ಇದರ ಪ್ರಯೋಜನ ಪಡೆಯುವಂತೆ ತಿಳಿಸಿ ಭಾರತೀಯ ಸಂಸ್ಕೃತಿಯ ವೈವಿಧ್ಯತೆಯ, ವೈಚಾರಿಕವಾಗಿ ವಿಶೇಷತೆಯನ್ನು ಕಲಿಸುವ ವಿದ್ಯಾಸಂಸ್ಥೆಯಾಗಿ ಬೆಳೆಯಲಿ ಎಂದು ಹೇಳಿ ಶುಭಹಾರೈಸಿದರು.‌

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಸಭಾಧಕ್ಷತೆ ವಹಿಸಿ ಮಾತನಾಡಿ ಮಾತೃಭಾಷೆಗೆ ಅತೀ ಸುಲಭದಲ್ಲಿ ಕಲಿಯುವ ಶಕ್ತಿ ಇರುತ್ತದೆ. ಪ್ರಾರಂಭದ ಐದು ವರ್ಷ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಿ ನಂತರ ಹೊರ ಜಗತ್ತಿಗೆ ಬೇಕಾಗುವಂತಹ ಭಾಷೆಯಲ್ಲಿ ಶಿಕ್ಷಣ ನೀಡಲಾಗುವುದು ಎಂದು ತಿಳಿಸಿ ವಿವೇಕಾನಂದ ವಿದ್ಯಾವರ್ಧಕ ಸಂಘ ಬೆಳೆದು ಬಂದ ರೀತಿಯನ್ನು ತಿಳಿಸಿದರು. ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು, ನಮ್ಮ ದೃಷ್ಟಿಕೋನವನ್ನು ಕೊಡುತ್ತಾ, ನಮ್ಮ ಸಭ್ಯತೆ, ಶ್ರೇಷ್ಟತೆಯನ್ನು ತಿಳಿಸುತ್ತ ಮುಂದಿನ ವೈಜ್ಞಾನಿಕ ಸವಾಲುಗಳನ್ನು ಎದುರಿಸುವ ಶಕ್ತಿತುಂಬುವ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಬೇಕೆಂದು ತಿಳಿಸಿ ಈ ದೇಶದಲ್ಲಿ ಎಲ್ಲರಿಗೂ ಭಗವದ್ಗೀತೆಯ ಶಿಕ್ಷಣ ಸಿಗಬೇಕು ಎಲ್ಲರೂ ಹಿಂದುತ್ವದ ಆಧಾರದಲ್ಲಿ ಬೆಳೆಯಬೇಕು ಎಂದು ತಿಳಿಸಿ ಶುಭಾಹಾರೈಸಿದರು. ಮಂಗಳೂರು ಮಹಾನಗರ ಸಹಸಂಘ ಚಾಲಕ ಹಾಗೂ ಗೋದ್ರೆಜ್ ಕಂಪೆನಿಯ ಆಫೀಸ್ ಫರ್ನಿಚರ್ ಸೆಕ್ಯೂರಿಟಿ ಫರ್ನಿಚರ್ ಹೋಂ ಫರ್ನಿಚರ್ ಅಧಿಕೃತ ಡೀಲರ್ ಸುನಿಲ್ ಆಚಾರ್‌ರವರು ಶಾಲಾ ಕ್ಯೂ.ಆರ್.ಕೋಡ್ ಹಾಗು ಶಾಲಾ ಮ್ಯಾನೇಜ್‌ಮೆಂಟ್ ಸಾಫ್ಟ್‌ವೇರ್ ಅನಾವರಣ ಮಾಡಿ ಶುಭಹಾರೈಸಿದರು. ಪ್ರಕಾಶಿನಿ .ವಿ.ಶೆಟ್ಟಿ ಮರುವಂತಿಲ ಪ್ರಾಜೆಕ್ಟರ್ ಉದ್ಘಾಟನೆ ಮಾಡಿ ಮಾತನಾಡಿ, ನನ್ನ ಮಗ ಆಕಾಶ್ ಈ ಶಾಲೆಯ ಹಿರಿಯ ವಿದ್ಯಾರ್ಥಿಯಾಗಿದ್ದು ಈಗ ವಿದೇಶದಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದಾನೆ ತಾನು ಕಲಿತ ಶಾಲೆಗೆ ಕೊಡುಗೆಯಾಗಿ ಅಂದಾಜು 70,೦೦೦ ರೂಪಾಯಿಯ ಪಾಜೆಕ್ಟರ್ ನೀಡಿದ್ದಾನೆ. ಇದರಿಂದ ಎಲ್ಲಾ ಮಕ್ಕಳಿಗೆ ಕಲಿಕೆಗೆ ಉಪಯೋಗವಾಗಲಿದೆ ಎಂದು ತಿಳಿಸಿ ತಾನು ಕಲಿತ ಶಾಲೆಗೆ ಇನ್ನಷ್ಟು ಕೊಡುಗೆಯನ್ನು ನೀಡುವಂತಾಗಲಿ ಎಂದು ಹೇಳಿ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಶಾಲಾ ಸಾಫ್ಟ್‌ವೇರ್‌ನ ಬಗ್ಗೆ ಚಂದ್ರಶೇಖರ್, ಪ್ರಾಜೇಕ್ಟರ್‌ನ ಬಗ್ಗೆ ಮಾಹಿತಿಯನ್ನು ಚೇತನ್‌ರವರು ತಿಳಿಸಿದರು. ತಿಮ್ಮಪ್ಪ ಗೌಡ ಕುಂಡಡ್ಕರವರು ಕನ್ನಡ ಮಾಧ್ಯಮದ ಮೂರು ಮಕ್ಕಳ ದತ್ತಿನಿಧಿಯ ಚೆಕ್ಕ್‌ನ್ನು ಶಾಲೆಗೆ ಹಸ್ತಾಂತರಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಸುರೇಶ್ ಕುಡೂರು ಸ್ವಾಗತಿಸಿ, ಸಂಚಾಲಕ ಗಂಗಾಧರ ಗೌಡ ಕುಂಡಡ್ಕ ಪ್ರಾಸ್ತವಿಕವಾಗಿ ಮಾತನಾಡಿ ಚಂದ್ರಹಾಸ ಕೆ.ಸಿ ಕಾರ್ಯಕ್ರಮ ನಿರೂಪಿಸಿ, ಶಾಲಾ ಮುಖ್ಯಗುರು ಸತೀಶ್ ಜಿ. ಆರ್ ವಂದಿಸಿದರು. ವೇದಿಕೆಯಲ್ಲಿ ಪ್ರಭಾರ ಮುಖ್ಯಮಾತಾಜಿ ಆಶಾ ಎಸ್. ರೈ ಅಡಳಿತ ಮಂಡಳಿಯ ಗೌರವಾಧ್ಯಕ್ಷ ಕೃಷ್ಣಕುಮಾರ್ ಅತ್ರಿಜಾಲು, ಉಪಾಧ್ಯಕ್ಷ ಈಶ್ವರ ಗೌಡ ಪಜ್ಜಡ್ಕ, ಕಾರ್ಯದರ್ಶಿ ಇಂದುಶೇಖರ ಶೆಟ್ಟಿ, ಕೋಶಾಧಿಕಾರಿ ರಾಮಚಂದ್ರ ಭಟ್ ಉಪಸ್ಥಿತರಿದ್ದರು. ಶಾಲಾ ಮಕ್ಕಳ ಪೋಷಕರು, ಬೋಧಕ, ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here