ಬಲ್ನಾಡು: ಜೀಪು, ರಿಕ್ಷಾ ಡಿಕ್ಕಿ – ಜೀಪು ಚಾಲಕನಿಗೆ ಗಾಯ

0

ಪುತ್ತೂರು:ಬಲ್ನಾಡು ಬೀಡು ಎಂಬಲ್ಲಿ ಜೀಪು ಮತ್ತು ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಜೂ.21ರಂದು ನಡೆದಿದೆ. ಅಪಘಾತದಿಂದಾಗಿ ಜೀಪು ಚಾಲಕನಿಗೆ ಗಾಯವಾಗಿದೆ.

ಪೆರ್ನೆ ಗ್ರಾಮದ ವಡ್ಯದಗಯ ನಿವಾಸಿ ನಾರಾಯಣ ಭಟ್ ಅವರು ಗಾಯಗೊಂಡವರು. ಅವರು ಪುಣಚದಲ್ಲಿ ಕಾರ್ಯಕ್ರಮಕ್ಕೆಂದು ತನ್ನ ಜೀಪು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಬಲ್ನಾಡು ಗ್ರಾಮದ ಬೀಡು ಎಂಬಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ರಿಕ್ಷಾ ಮತ್ತು ಜೀಪಿನ ನಡುವೆ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಜೀಪು ಚಾಲಕ ನಾರಾಯಣ ಭಟ್ ಅವರ ಕೈಗೆ ಗಾಯವಾಗಿದ್ದು, ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. 337 IPC ಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here