ಪಾಣಾಜೆ ಸುಬೋಧ ಪ್ರೌಢಶಾಲಾ  ರಕ್ಷಕ ಶಿಕ್ಷಕ ಸಂಘ ರಚನೆ

0

ಪಾಣಾಜೆ:ಇಲ್ಲಿಯ ಸುಬೋಧ ಪ್ರೌಢಶಾಲೆಯಲ್ಲಿ ಶಾಲಾ ಸಂಚಾಲಕರಾದ ಗಿಳಿಯಾಲು ಮಹಾಬಲೇಶ್ವರ ಭಟ್ಟರ ಅಧ್ಯಕ್ಷತೆಯಲ್ಲಿ ಮಕ್ಕಳ  ಪೋಷಕರ ಸಭೆ ಜು.15 ರಂದು  ಜರುಗಿತು.ಸಭೆಯಲ್ಲಿ 2023-2024 ನೇ ಸಾಲಿನ ರಕ್ಷಕ ಶಿಕ್ಷಕ ಸಂಘ ಹಾಗೂ ಇತರ ಸಮಿತಿಗಳನ್ನು ರಚಿಸಲಾಯಿತು.

ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಭಾಸ್ಕರ ಪೂಜಾರಿ ನಡುಕಟ್ಟ, ಉಪಾಧ್ಯಕ್ಷರಾಗಿ ಜಯಶ್ರೀ ದೇವಸ್ಯ ಹಾಗೂ ಕಾರ್ಯದರ್ಶಿಯಾಗಿ ಲಲಿತ ಸೂರಂಬೈಲು ಆಯ್ಕೆಯಾದರು. ಸದಸ್ಯರುಗಳಾಗಿ ಮಣಿಕಂಠ ಕಟ್ಟ, ಜಯಶ್ರೀ ತೂoಬಡ್ಕ, ಹೇಮಾವತಿ ಭರಣ್ಯ, ಶಶಿಕಲ ಪಿದಾರ, ಸುಂದರಿ ಪಾರ್ಪಳ, ಭವಾನಿ ತೂoಬಡ್ಕ, ಅಬ್ದುಲ್ ಕುಂಞ ಪರಾರಿ ಹಾಗೂ ಶಶಿಧರ ಪಾಲ್ತ ಮೂಲೆ ಆಯ್ಕೆಯಾದರು.

ತಾಯಂದಿರ ಸಮಿತಿ
ಸುಶೀಲ ಗುವೇಲುಗದ್ದೆ, ಮಮತಾ ತೂoಬಡ್ಕ, ಗೀತಾ ಭರಣ್ಯ, ಸುಜಾತ ಜೋಗಿ ಮೂಲೆ, ಪುಷ್ಪ ಮಲ್ಲತಡ್ಕ, ಆನಂದಿ ಗುಡ್ಡೆಮನೆ, ಪುಷ್ಪರಾಣಿ ಪರಾರಿ ಇವರನ್ನು ತಾಯಂದಿರ ಸಮಿತಿಗೆ ಸೇರಿಸಲಾಯಿತು.

ಮಕ್ಕಳ ಸುರಕ್ಷಾ ಸಮಿತಿ
 ಭಾಸ್ಕರ ಜೋಗಿ ಮೂಲೆ, ಶ್ರೀಧರ ಮಣಿಯಾಣಿ ದೇವಸ್ಯ, ವಸಂತಿ ಗೋಳಿಪದವು, ಶಶಿಕಲಾ ಬೊಳ್ಳುಕಲ್ಲು, ಆನಂದ ಭರಣ್ಯ, ಲಲಿತ ಗುಡ್ಡೆ, ಅಮೀನಾ ಅರ್ಲಪದವು ಇವರನ್ನು ಮಕ್ಕಳ ಸುರಕ್ಷಾ ಸಮಿತಿಗೆ ಆರಿಸಲಾಯಿತು. ನೂತನವಾಗಿ ಆಯ್ಕೆಯಾದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಭಾಸ್ಕರ ಪೂಜಾರಿ ಅವರನ್ನು ಹೂಗುಚ್ಛ ನೀಡಿ ಸಂಚಾಲಕರಾದ ಮಹಾಬಲೇಶ್ವರ ಭಟ್ ಗಿಳಿಯಾಲು ಅಭಿನಂದಿಸಿದರು.

 ಮುಖ್ಯ ಶಿಕ್ಷಕ ಶ್ರೀಪತಿ ಭಟ್ ಐ  ಪ್ರಾಸ್ತಾವಿಕವಾಗಿ  ಮಾತನಾಡಿ  ಸ್ವಾಗತಿಸಿದರು.  ವಿದ್ಯಾರ್ಥಿನಿಯರಾದ ದೀಪಿಕಾ, ಚೈತನ್ಯ ಜಿ, ಗ್ರೀಷ್ಮಾ ಎ. ಪ್ರಾರ್ಥಿಸಿ, ದೈಹಿಕ ಶಿಕ್ಷಣ ಶಿಕ್ಷಕ ಸುಧೀರ್ ಎಸ್. ಪಿ  ವಂದಿಸಿದರು. ಸಹಶಿಕ್ಷಕಿ ನಿರ್ಮಲ ಕೆ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕರು ಸಹಕರಿಸಿದರು.

 

LEAVE A REPLY

Please enter your comment!
Please enter your name here