ಕುರಿಯ ಪರೆಂಕೀಲು ಚೆನ್ನಕೇಶವ ಗೌಡ ನಿಧನ

0

ಪುತ್ತೂರು: ಕುರಿಯ ಗ್ರಾಮದ ಪರೆಂಕೀಲು ನಿವಾಸಿ ಚೆನ್ನಕೇಶವ ಗೌಡ (54ವ.)ರವರು ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆ.14ರಂದು ನಿಧನರಾದರು.
ರಿಕ್ಷಾ ಚಾಲಕರಾಗಿದ್ದ ಚೆನ್ನಕೇಶವ ಅವರು ಪುತ್ತೂರು ಚೇತನಾ ಆಸ್ಪತ್ರೆಯ ಆಂಬುಲೆನ್ಸ್‌ನಲ್ಲೂ ಚಾಲಕರಾಗಿ ಕೆಲಸ ಮಾಡುತ್ತಿದ್ದರು.


ಕಿಡ್ನಿ ಕ್ಯಾನ್ಸರ್ ಮತ್ತು ಮೂತ್ರ ಪಿಂಡದ ವೈಫಲ್ಯದಿಂದ ಬಳಲುತ್ತಿದ್ದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಪತ್ನಿ ಜಲಜಾಕ್ಷಿ, ಪುತ್ರರಾದ ಪ್ರೀತಂ, ಅಭಿಲಾಷ್, ಪುತ್ರಿ ಅಭಿಜ್ಞಾ, ಸಹೋದರ ಸೀತಾರಾಮ, ಸಹೋದರಿಯರಾದ ವಿಮಲ, ಭವಾನಿ, ದಯಮಂತಿ, ಸರೋಜಿನಿಯವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here