ಮಾಂತೂರು ಅಲ್ ಇಹ್ಸಾನ್ ಯೂತ್ ಕೌನ್ಸಿಲ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ಅಲ್ ಇಹ್ಸಾನ್ ಯೂತ್ ಕೌನ್ಸಿಲ್ ಮಾಂತೂರು ಇದರ ವತಿಯಿಂದ ಮಾಂತೂರು ಬದ್ರಿಯಾ ಮಸೀದಿ ಮುಂಭಾಗದಲ್ಲಿ ನಡೆದ 77ನೇ ಸ್ವಾತಂತ್ರ್ಯೋತ್ಸವದಲ್ಲಿ ಸಮಿತಿಯ ಅಧ್ಯಕ್ಷ ಎಂ.ಎಸ್.ರಫೀಕ್ ಧ್ವಜಾರೋಹಣ ನೆರೆವೇರಿಸಿದರು. ಅಲ್ ಇಹ್ಸಾನ್ ಯೂತ್ ಕೌನ್ಸಿಲ್‌ನ ಗೌರವಾಧ್ಯಕ್ಷರು, ಸವಣೂರು ಗ್ರಾ.ಪಂ ಸದಸ್ಯರಾದ ರಜಾಕ್ ಕೆನರಾ ಅಧ್ಯಕ್ಷತೆ ವಹಿಸಿದ್ದರು.

ಸವಣೂರು ಗ್ರಾ.ಪಂ ಸದಸ್ಯ ಎಂ.ಎ ರಫೀಕ್, ಮಾಂತೂರು ಹಿದಾಯತುಲ್ ಇಸ್ಲಾಂ ಮದರಸದ ಸದರ್ ಸಿದ್ದೀಕ್ ಮುಸ್ಲಿಯಾರ್ ಸಂದೇಶ ಭಾಷಣ ಮಾಡಿದರು.
ಸವಣೂರು ಚಾಪಳ್ಳ ಬದ್ರಿಯಾ ಜುಮಾ ಮಸ್ಜಿದ್‌ನ ಅಧ್ಯಕ್ಷ ಉಮ್ಮರ್ ಹಾಜಿ ಕೆನರಾ, ಉಪಾಧ್ಯಕ್ಷ ಮಹಮ್ಮದ್ ಹಾಜಿ ಸೋಂಪಾಡಿ, ಸಮಿತಿ ಸದಸ್ಯರಾದ ಎಸ್.ಇ.ಅಬ್ದುಲ್ಲ, ಮಾಜಿ ಅಧ್ಯಕ್ಷ ಪುತ್ತುಬಾವ ಹಾಜಿ, ಸದಸ್ಯರಾದ ಅಬ್ದುಲ್ ರಹ್ಮಾನ್ ಹಾಜಿ ಮುಂಡತ್ತಡ್ಕ, ಮಾಂತೂರು ಹಿದಾಯತುಲ್ ಇಸ್ಲಾಂ ಮದರಸ ಉಸ್ತಾದರಾದ ಶರೀಫ್ ಮುಸ್ಲಿಯಾರ್, ರಶೀದ್ ಉಸ್ತಾದ್, ಸಮಿತಿಯ ಮಾಜಿ ಅಧ್ಯಕ್ಷ ನಝೀರ್ ಮುಂಡತ್ತಡ್ಕ, ಇಕ್ಬಾಲ್ ಕೆನರಾ ಉಪಸ್ಥಿತರಿದ್ದರು. ಅಲ್ ನೂರ್ ಯೂತ್ ಫೆಡರೇಶನ್ ಅಧ್ಯಕ್ಷ ಜಕಾರಿಯಾ ಪ್ರಸ್ತಾವನೆಗೈದರು. ಸಮಿತಿಯ ಕಾರ್ಯದರ್ಶಿ ಯು.ಎಸ್ ಸಲೀಂ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here