ಕಡಬ: ರಾಮಸೇನೆ ಸಮಿತಿ ರಚನೆ‌

0

ಪುತ್ತೂರು ಜಿಲ್ಲಾಧ್ಯಕ್ಷ: ಗೋಪಾಲ್ ನಾೖಕ್‌, ತಾ. ಅಧ್ಯಕ್ಷ: ಅಶ್ವತ್, ಅಧ್ಯಕ್ಷ: ಮೋಹನ

ಕಡಬ: ರಾಮ ಸೇನೆಯ ಪದಾಧಿಕಾರಿಗಳ ಆಯ್ಕೆ ಸಭೆಯು ಸೆ.26ರಂದು ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಪುತ್ತೂರು ಜಿಲ್ಲಾಧ್ಯಕ್ಷರಾಗಿ ಗೋಪಾಲ್ ನಾೖಕ್‌ ಮೇಲಿನ ಮನೆ, ಕಡಬ ತಾಲೂಕು ಅಧ್ಯಕ್ಷರಾಗಿ ಅಶ್ವತ್, ಕಡಬ ನಗರ ಅಧ್ಯಕ್ಷರಾಗಿ ಮೋಹನ ಡಿ.ಟಿ. ಕಡಬ ತಾಲೂಕು ಉಪಾಧ್ಯಕ್ಷರಾಗಿ ಶಶಿಧರ ದೇವಸ್ಯ, ಗೌರವ ಸಲಹೆಗಾರರಾಗಿ ನಿವೃತ್ತ ಶಿಕ್ಷಕ ಎಲ್ಯಣ್ಣ ಗೌಡ ಅವರು ಆಯ್ಕೆಯಾಗಿದ್ದಾರೆ. ಕಾರ್ಯಕ್ರಮವನ್ನು ರಾಮಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿರಣ್ ಅಮೀನ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿಭಾಗ ಅಧ್ಯಕ್ಷ ಪ್ರದೀಪ್ ಮೂಡುಶೆಡ್ಡೆ, ಜಿಲ್ಲಾಧ್ಯಕ್ಷ ಸುಪ್ರೀತ್ ಸಾಲಿಯಾನ್, ಜಿಲ್ಲಾ ಉಪಾಧ್ಯಕ್ಷ ಪ್ರವೀಣ್ ನೀರುಮಾರ್ಗ, ಧಾರ್ಮಿಕ ಮುಂದಾಳು ಸುನಿತ್ ರಾಜ್ ಶೆಟ್ಟಿ, ಹರ್ಷರಾಜ್ ಪರಂಗೀಪೇಟೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here