ಶಾರದಾ ಭಜನಾ ಮಂದಿರದ ಮಾಜಿ ಕಾರ್ಯದರ್ಶಿ ಬೊಳುವಾರು ಮಾಲಿಂಗ ಆಚಾರ್ಯ ನಿಧನ

0

ಪುತ್ತೂರು: ಪುತ್ತೂರು ಶಾರದಾ ಭಜನಾ ಮಂದಿರದ ಮಾಜಿ ಕಾರ್ಯದರ್ಶಿ ಮತ್ತು ನಗರ ಪೊಲೀಸ್ ಠಾಣೆ ಎದುರಿನ ಶಾರದಾ ಕಾಂಪ್ಲೆಕ್ಸ್ ಮಾಲಕ ಬೊಳುವಾರು ಮಾಲಿಂಗ ಆಚಾರ್ಯ(83ವ) ಅವರು ಅ.31 ರಂದು ಪುತ್ತೂರು ಆಸ್ಪತ್ರೆಯಲ್ಲಿ ನಿಧನರಾದರು.

ಮೂಲತಃ ಬೊಳುವಾರು ನಿವಾಸಿಯಾಗಿದ್ದು ಹಲವು ವರ್ಷಗಳಿಂದ ತನ್ನ ಶಾರದಾ ಕಾಂಪ್ಲೆಕ್ಸ್ ನ ಮೇಲಂತಸ್ತಿನ ಕೊಠಡಿಯಲ್ಲಿ ಏಕಾಂಗಿಯಾಗಿ ವಾಸ್ತವ್ಯ ಹೊಂದಿದ್ದರು. ಅ.31 ರ ಮಧ್ಯಾಹ್ನ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ರಾತ್ರಿ ನಿಧನರಾದರು.

ಶಾರದಾ ಭಜನಾ ಮಂದಿರದಲ್ಲಿ ತನ್ನ 12 ನೇ ವಯಸ್ಸಿನಲ್ಲಿ ಭಜನೆಗೆ ಬರುತ್ತಿದ್ದ ಮಾಲಿಂಗ ಆಚಾರ್ಯ ಅವರು ಮಂದಿರದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಇತ್ತೀಚೆಗೆ ಶಾರದೋತ್ಸವ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು. ಮೃತರು ಪುತ್ರಿಯರಾದ ಪೂರ್ಣಿಮ ಮತ್ತು ಮೀರಾ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here