ಚಿಕ್ಕಮುಡ್ನೂರು ಮೂಡಾಯೂರುಗುತ್ತು ಅರಿಗೋ ಪೆರ್ಮಂಡ ಗರಡಿಯಲ್ಲಿ ಶ್ರೀ ಬೈದೇರುಗಳ ನೇಮಕ್ಕೆ ಗೊನೆ ಮುಹೂರ್ತ

0

ಪುತ್ತೂರು: ಚಿಕ್ಕಮುಡ್ನೂರು ಮುಡಾಯೂರುಗುತ್ತು ಅರಿಗೋ ಪೆರ್ಮಂಡ ಗರಡಿಯಲ್ಲಿ ಡಿ.21ರಿಂದ ಡಿ.25ರವರೆಗೆ ನಡೆಯುವ ಶ್ರೀ ಬೈದೇರುಗಳ ನೇಮೋತ್ಸವಕ್ಕೆ ಮುಡಾಯೂರುಗುತ್ತು ಕುಟುಂಬಸ್ಥರ ನೇತೃತ್ವದಲ್ಲಿ ಡಿ.16ರಂದು ಬೆಳಿಗ್ಗೆ ಗೊನೆ ಮುಹೂರ್ತ ನಡೆಯಿತು.

ಧನ್ಯಕುಮಾರ್ ರೈ ಬಿಳಿಯೂರುಗುತ್ತು ಮತ್ತು ಡಾ.ಅಶೋಕ್ ಪಡಿವಾಳ್‌ ಮುಡಾಯೂರುಗುತ್ತು ರವರು ಗರಡಿಯಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಗೊನೆ ಮುಹೂರ್ತ ನಡೆಯಿತು. ನರೇಂದ್ರ ಪಡಿವಾಳ್ ಮೂಡಾಯೂರುಗುತ್ತು, ಹರ್ಷೇಂದ್ರ ಪಡಿವಾಳ್ ಮೂಡಾಯೂರುಗುತ್ತು, ಬಾಳಪ್ಪ ಪೂಜಾರಿ ಕೇಪುಳು, ರಘು ಶೆಟ್ಟಿ, ಸಂಕಪ್ಪ ರೈ, ರಾಜೇಶ್, ವಿಶ್ವನಾಥ ಪೂಜಾರಿ, ಶೀನಪ್ಪ ಪೂಜಾರಿ, ಅಣ್ಣಿ ಪೂಜಾರಿ, ಚಂದ್ರ ಬಡಾವು, ತಿಮ್ಮಪ್ಪ ಗೌಡ, ರಾಜೇಶ್ ಪೂಜಾರಿ, ಸುಂದರ ಪೂಜಾರಿ, ದಿನೇಶ್ ಪೂಜಾರಿ, ಅಣ್ಣಿ ಪೂಜಾರಿ ಬೀರ್ನೆತ್ತಿಲ್ ಅರಿಗೊ ಹಾಗೂ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here