ಆತೂರು: ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆಯಲ್ಲಿ ಹ್ಯಾಟ್ರಿಕ್ ಚಾಂಪಿಯನ್ ಪಡೆದ ಮದರಸ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ

0

ಉಪ್ಪಿನಂಗಡಿ: ಸಮಸ್ತ ಕೇರಳ ಜಂ-ಇಯ್ಯತುಲ್ ಮುಅಲ್ಲಿಮೀನ್ ಕೇಂದ್ರ ಕೌನ್ಸಿಲ್ ವತಿಯಿಂದ ಮದ್ರಸ ವಿದ್ಯಾರ್ಥಿಗಳಿಗೆ ನಡೆಸಲ್ಪಡುವ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆಯ ಆತೂರು ರೇಂಜ್ ಮಟ್ಟದ ಸ್ಪರ್ಧಾಕೂಟದಲ್ಲಿ ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಚಾಂಪಿಯನ್ ಪಡೆದ ಆತೂರು ತದ್ಬೀರುಲ್ ಇಸ್ಲಾಂ ಕೇಂದ್ರ ಮದರಸ ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕ ವೃಂದವರಿಗೆ ಅಭಿನಂದನಾ ಕಾರ್ಯಕ್ರಮ ಆತೂರು ಬದ್ರಿಯಾ ಹಾಲ್‌ನಲ್ಲಿ ಜಮಾಅತ್ ಕಮಿಟಿ ಅಧ್ಯಕ್ಷರಾದ ಯಚ್. ಅಹ್ಮದ್ ಕುಂಞಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.


ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಆತೂರು ಉದ್ಘಾಟಿಸಿದರು. ಕೆ.ಎ.ಸುಲೈಮಾನ್ ಅಭಿನಂದನೆ ಸಲ್ಲಿಸಿದರು. ಸಮಾರಂಭದಲ್ಲಿ ಮದ್ರಸ ಅಧ್ಯಾಪಕರಾದ ಹಂಝ ಸಖಾಫಿ, ಸಂಶುದ್ದೀನ್ ಹುದವಿ, ಇಸ್ಮಾಯಿಲ್ ದಾರಿಮಿ, ಅಬ್ದಲ್ ರಹ್ಮಾನ್ ಝುಹ್ರಿ, ಬದ್ರಿಯಾ ಶಾಲಾ ಶಾಲಾ ಸಂಚಾಲಕರಾದ ಆದಂ ಹಾಜಿ ಪಿಲಿಕುಡೆಲು, ಪೊಡಿಕುಂಞಿ ನೀರಾಜೆ, ಝಕರಿಯ್ಯಾ ಹಾಜಿ, ಇಸ್ಹಾಕ್ ಕೆಮ್ಮಾರ, ಸಿದ್ದೀಕ್ ಎನ್, ಪತ್ರಕರ್ತ ನಝೀರ್ ಕೊಯಿಲ,. ಸಿ.ಕೆ.ಸಿದ್ದೀಕ್, ಹಸನ್ ನೆಲ್ಯೋಟ್ ಹಾಗೂ ರಕ್ಷಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕರಾದ ಕೆಯಂಎಸ್ ಸಿದ್ದೀಕ್ ಫೈಝಿ ಕರಾಯ ಸ್ವಾಗತಿಸಿ, ಜಮಾಅತ್ ಕಾರ್ಯದರ್ಶಿ ಸಿರಾಜ್ ಬಡ್ಡಮೆ ವಂದಿಸಿದರು.

LEAVE A REPLY

Please enter your comment!
Please enter your name here