ಕಲ್ಲೇಗ ಜಾತ್ರೋತ್ಸವ – ಪೇಟೆಯಲ್ಲಿ ಆಮಂತ್ರಣ ಪತ್ರ ವಿತರಣೆ

0

ಪುತ್ತೂರು: ಜ.24ರಂದು ಇತಿಹಾಸ ಪ್ರಸಿದ್ಧ ಪುತ್ತೂರು ಕಲ್ಲೇಗ ಶ್ರೀ ಕಲ್ಕುಡ ದೈವದ ವಾರ್ಷಿಕ ಜಾತ್ರೋತ್ಸವದ ಹಿನ್ನೆಲೆಯಲ್ಲಿ ಭಕ್ತರಿಗೆ ಆಮಂತ್ರಣ ಪತ್ರ ವಿತರಣಾ ಕಾರ್ಯಕ್ರಮ ಜ.20 ರಂದು ಸಂಜೆ ಪುತ್ತೂರು ಪೇಟೆಯಲ್ಲಿ ನಡೆಯಿತು.


ದರ್ಬೆ ವೃತ್ತದಿಂದ ಬೊಳುವಾರು ತನಕ ಆಮಂತ್ರಣ ಪತ್ರ ವಿತರಣಾ ಕಾರ್ಯಕ್ರಮವನ್ನು ಸಾರ್ವಜನಿಕರಿಗೆ ವಿತರಣೆ ಮಾಡುವ ಮೂಲಕ ಕಲ್ಲೇಗ ದೈವಸ್ಥಾನದ ತನಕ ಪಾದಯಾತ್ರೆ ಮೂಲಕ ತರಲಾಯಿತು. ಕೊಂಬು ಕಹಳೆಯೊಂದಿಗೆ, ಕೇಸರಿ ಧ್ವಜಗಳು ಪತ್ರ ವಿತರಣೆಗೆ ಮೆರುಗು ನೀಡಿತ್ತು. ಕಲ್ಲೇಗ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಅಜಿತ್ ಕುಮಾರ್ ಜೈನ್, ಕಲ್ಲೇಗ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ, ನಗರಸಭಾ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್, ಜಿನ್ನಪ್ಪ ಪೂಜಾರಿ ಮುರ, ನಗರಸಬಾ ಸದಸ್ಯ ದಿನೇಶ್, ಸುನೀತ, ಪ್ರಶಾಂತ್ ಎಸ್, ರಾಘವೇಂದ್ರ ಪ್ರಭು, ಮಾಧವ ಪೂಜಾರಿ ಪಟ್ಲ, ಪ್ರಸಾದ್ ಬೀಡಿಗೆ, ಬಿ.ರವಿಕಿರಣ, ಊರಿನ ಹಿರಿಯರಾದ ಚಂದ್ರಶೇಖರ್ ಗೌಡ ಕಲ್ಲೇಗ, , ಗಿರಿಯಪ್ಪ ಗೌಡ ಪೋಳ್ಯ, ಮನೋಹರ್ ಕಲ್ಲೇಗ, ನಾರಾಯಣ ಮೊಗೇರ,ಸುಂದರ ಮುಗೇರ, ಜಯ ಕುಮಾರ್ ಕಾರೆಕ್ಕಾಡು, ವೆಂಕಟ್ರಮಣ ಗೌಡ ಅಜೇಯನಗರ, ಶಂಕರ್ ಪಾಟಾಳಿ, ಗಂಗಧರ ಸಪಲ್ಯ, ಪುಷ್ಪ, ಸಿದ್ದಾಂತ್, ಯೋಗೀಶ, ಕಲಾವಿದ ಕೃಷ್ಣಪ್ಪ, ಮುರಳಿ, ಪ್ರಶಾಂತ್ ಮುರ, ಗಣೇಶ್ ಆಚಾರ್ಯ, ಪ್ರಶಾಂತ್ ಅಜೇಯನಗರ, ರಮ್ಯ, ರೇಖಾ ಕಲ್ಲೇಗ, ಜಯರಾಮ ಗೌಡ, ಅಭಿ, ನಿತೇಶ್ ನೆಲಪ್ಪಾಲು, ರಾಧಾಕೃಷ್ಣ ನಾಕ್, ಗೋವರ್ಧನ ಕುಮೆರಡ್ಕ, ರಮೇಶ್ ಸಹಿತ ಹಲವಾರು ಮಂದಿ ಆಮಂತ್ರಣ ವಿತರಣಾ ಮೆರವಣಿಗೆಯಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here