ಈಶ್ವರಮಂಗಲ: ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ನೂತನ ವಿಗ್ರಹದ ಪ್ರಾಣಪ್ರತಿಷ್ಠೆ ಅಂಗವಾಗಿ ಭಜನೆ, ಕುಣಿತ ಭಜನೆ, ಧಾರ್ಮಿಕ ಸಭೆ

0

ಪುತ್ತೂರು: ಅಯೋಧ್ಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಈಶ್ವರಮಂಗಲ ಇದರ ಆಶ್ರಯದಲ್ಲಿ ಅಯೋಧ್ಯೆಯ ಶ್ರೀರಾಮಲಲ್ಲಾ (ಬಾಲ ರಾಮನ) ನೂತನ ವಿಗ್ರಹದ ಪ್ರಾಣ ಪ್ರತಿ಼ಷ್ಠೆಯ ಅಂಗವಾಗಿ ಈಶ್ವರಮಂಗಲ ಪಂಚಲಿಂಗೇಶ್ವರ ಸಭಾಭವನದಲ್ಲಿ ಬೆಳಿಗ್ಗೆ ಭಜನೆ, ಮಕ್ಕಳ ಕುಣಿತ ಭಜನೆ, ಧಾರ್ಮಿಕ ಸಭೆ ನಡೆಯಿತು.

ಮಂಗಳೂರು ವಿಭಾಗ ಸಾಮರಸ್ಯ ವೇದಿಕೆಯ ಸಹ ಸಂಚಾಲಕ ಶಿವಪ್ರಸಾದ್ ಮಲೆಬೆಟ್ಟು ಉಜಿರೆ ಧಾರ್ಮಿಕ ಪ್ರವಚನ ನೀಡಿದರು. ಈಶ್ವರಮಂಗಲ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಮಂಜುನಾಥ ರೈ ಸಾಂತ್ಯ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಪವಿತ್ರಪಾಣಿ ಗೋಪಾಲಕೃಷ್ಣ ಕುಂಜತ್ತಾಯ ಉಪಸ್ಥಿತರಿದ್ದರು. ಸಭೆಯಲ್ಲಿ ಪ್ರವೀಣ ರೈ ಮೇನಾಲ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಆನಂದ ರೈ ಸಾಂತ್ಯ ನಿರೂಪಿಸಿ, ರಾಮ್ ಪ್ರಸಾದ್ ಆಳ್ವ ವಂದಿಸಿದರು.

ಈ ಸಂದರ್ಭದಲ್ಲಿ ಈ ಹಿಂದೆ ಅಯೋದ್ಯೆ ಕರಸೇವಕರಾಗಿ ಭಾಗವಹಿಸಿದವರನ್ನು ಮತ್ತು ಭಜಕರನ್ನು ಗೌರವಿಸಲಾಯಿತು. ದೇವಳದಲ್ಲಿ ಮಧ್ಯಾಹ್ನ ಸರ್ವಸೇವೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಎಲ್ ಇಡಿ ಪರದೆಯಲ್ಲಿ ಅಯೋಧ್ಯೆಯಲ್ಲಿ ನಡೆದ ಶ್ರೀರಾಮಲಲ್ಲಾನ ನೂತನ ವಿಗ್ರಹದ ಪ್ರಾಣ ಪ್ರತಿಷ್ಠೆಯ ನೇರಪ್ರಸಾರ ನಡೆಯಿತು. ಬಳಿಕ ದೆಲಂಪಾಡಿ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ಬನಾರಿಯವರಿಂದ ಯಕ್ಷಗಾನ ತಾಳ ಮದ್ದಲೆ ರಾಮಾನುಜ ಯಕ್ಷಗಾನ ತಾಳಮದ್ದಲೆ ನಡೆಯಿತು.

LEAVE A REPLY

Please enter your comment!
Please enter your name here