ಪಂಜ ಪೈಂದೋಡಿ ಶ್ರೀ ಸುಬ್ರಾಯ ದೇವಸ್ಥಾನದ ಭಕ್ತಿ ಗೀತೆ ಬಿಡುಗಡೆ

0

ಪುತ್ತೂರು: ಪಂಜ ಪೈಂದೋಡಿ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಪುತ್ತೂರು ಜಗದೀಶ್ ಆಚಾರ್ಯ ನಿರ್ದೇಶನ ಮತ್ತು ಗಾಯನದಲ್ಲಿ ಮೂಡಿಬಂದ “ಶ್ರೀ ಕ್ಷೇತ್ರದ ಪೈಂದೋಡಿ ಕ್ಷೇತ್ರಡ್ ಜಿಡೆ ದೇರ್ತು ಬೆಳಗುನ ಸ್ವಾಮಿ ಶ್ರೀ ಸುಬ್ರಾಯ..” ದೇವರ ಭಕ್ತಿ ಗೀತೆ ಬಿಡುಗಡೆ ಕಾರ್ಯಕ್ರಮ ಮಾ.16 ರಂದು ಕ್ಷೇತ್ರದಲ್ಲಿ ನಡೆಯಿತು.

ದೇವಳದ ಪ್ರದಾನ ಅರ್ಚಕ ವಿಷ್ಣು ಭಟ್ ಪೈಂದೋಡಿ ಮತ್ತು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿ ಪ್ರಸಾದ್ ಕಾನತ್ತೂರು ಬಿಡುಗಡೆ ಗೊಳಿಸಿದರು. ಇದೇ ವೇಳೆ ಗಾಯಕ ಜಗದೀಶ್ ಪುತ್ತೂರು, ಸಾಹಿತ್ಯ ರಚನೆ ಮಾಡಿದ ರಕ್ಷಿತ್ ಮಂಚಿಕಟ್ಟೆ ಹಾಗೂ ನಿರ್ಮಾಣ ಮಾಡಿದ ಚೇತನ್ ಪಂಜ ಅವರನ್ನು ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನವೀನ್ ಮಾವಜೀ ಬಹರೇನ್, ಮನು ಪಲ್ಲೋಡಿ ಪಂಜ, ಲಿಗೋಧರ ಆಚಾರ್ಯ, ಮಹೇಶ್ ಕೋಟೆ, ಸುಳ್ಯ ತಾಲೂಕು ಮಹಿಳಾ ಒಕ್ಕೂಟದ ಉಪಾಧ್ಯಕ್ಷೆ ಪುಷ್ಪ ದೇವಿ ಪ್ರಸಾದ್ ಭಾಗವಹಿಸಿದ್ದು ಕಮಿಟಿ ಸದಸ್ಯರು, ಕ್ಷೇತ್ರದ ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ತಾರಾನಾಥ ಬರಮೇಲು ನಿರೂಪಿಸಿದರು.

LEAVE A REPLY

Please enter your comment!
Please enter your name here