ತಾಳಿ ಕಟ್ಟಲು ನಿರಾಕರಿಸಿದ ವಧು – ಮುರಿದುಬಿದ್ದ ಮದುವೆ-ಠಾಣೆ ಮೆಟ್ಟಿಲೇರಿದ ಎರಡೂ ಕುಟುಂಬ

0

ನೆಲ್ಯಾಡಿ: ತಾಳಿ ಕಟ್ಟುವ ಶುಭವೇಳೆ ಕೈಯಲ್ಲಿ ಹೂವಿನ ಮಾಲೆ ಈ ಹಾಡು ಎಲ್ಲರಿಗೂ ತಿಳಿದದ್ದೆ. ಆದರೆ ಇಂದು ನಡೆದ ಘಟನೆ ಈ ಹಾಡಿನ ಸಾಲಿಗಿಂತ ಸ್ವಲ್ಪ ಭಿನ್ನವಾಗಿದ್ದು,ತಾಳಿಕಟ್ಟುವ ಶುಭ ವೇಳೆ..ವಧು ವರನನ್ನು ನಿರಾಕರಿಸಿದ್ದು ಎರಡೂ ಕಡೆಯವರು ಠಾಣೆಯ ಮೆಟ್ಟಿಲೇರುವಂತಾಗಿದೆ.

ನಡೆದಿದ್ದೇನು?
ಕಡಬ ತಾಲೂಕು ಕೊಣಾಲು ಗ್ರಾಮದ ಕೋಲ್ಪೆ ದಿ.ಬಾಬು ಗೌಡರ ಪುತ್ರ ಉಮೇಶ್‌ ಎಂಬಾತನಿಗೆ ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಕಂಟ್ರಮಜಲು ದಿ. ಕೊರಗಪ್ಪ ಗೌಡರ ಪುತ್ರಿ ಸರಸ್ವತಿ ಎಂಬ ಯುವತಿಯೊಂದಿಗೆ ಕಾಂಚನ ಪೆರ್ಲದ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ಇಂದು ವಿವಾಹ ನಡೆದು ಬಳಿಕ ಕೋಲ್ಪೆಯ ವರನ ಮನೆಯಲ್ಲಿ ಸತ್ಕಾರ ಕೂಟದ ವ್ಯವಸ್ಥೆ ಮಾಡಲಾಗಿತ್ತು.ಆದರೆ ಮದುವೆ ಮಂಟಪದಲ್ಲಿಯೇ ವಿಘ್ನ ಎದುರಾಗಿದೆ. ಧಾರಾ ಮುಹೂರ್ತದ ವೇಳೆ ತಾಳಿ ಕಟ್ಟಲು ವಧು ಸರಸ್ವತಿ ನಿರಾಕರಿಸಿದ್ದು, ನಡೆಯಬೇಕಿದ್ದ ಮದುವೆ ಮುರಿದುಬಿದ್ದಿದೆ. ವಧು ಯಾವ ಕಾರಣಕ್ಕೆ ಮದುವೆ ನಿರಾಕರಿಸಿದ್ದಾಳೆ ಎನ್ನುವ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಆದರೆ ಎರಡೂ ಕಡೆಯವರು ಭಗ್ನಗೊಂಡ ಕನಸಿನೊಂದಿಗೆ ನ್ಯಾಯಕ್ಕಾಗಿ ಉಪ್ಪಿನಂಗಡಿ ಠಾಣೆಯ ಮೆಟ್ಟಿಲೇರಿದ್ದಾರೆ.

LEAVE A REPLY

Please enter your comment!
Please enter your name here