ಸವಣೂರು : ಅಲ್ ಅನ್ಸಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪವಿತ್ರ ಹಜ್ಜ್ ಯಾತ್ರೆ- ಅನಿವಾಸಿ ಉದ್ಯಮಿ, ಕೊಡುಗೈ ದಾನಿ ಅಶ್ರಫ್ ಶಾ ಮಾಂತೂರು ಇವರಿಗೆ ಬೀಳ್ಕೊಡುಗೆ

0

ಸವಣೂರು : ಅಲ್ ಅನ್ಸಾರ್ ಚಾರಿಟೇಬಲ್ ಟ್ರಸ್ಟ್ ರಿ. ಸವಣೂರು ಇದರ ವತಿಯಿಂದ ಪವಿತ್ರ ಹಜ್ಜ್ ಯಾತ್ರೆಗೆ ತೆರಳುತ್ತಿರುವ ಅನಿವಾಸಿ ಉದ್ಯಮಿ, ಕೊಡುಗೈ ದಾನಿ ಅಶ್ರಫ್ ಶಾ ಮಾಂತೂರು ಇವರಿಗೆ ಬೀಳ್ಕೊಡುಗೆ ಸಮಾರಂಭ ಜೂನ್ 07ನೇ ಶುಕ್ರವಾರದಂದು ಅಂಬೇಡ್ಕರ್ ಭವನದಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ರಝಾಕ್ ಎಸ್ ಆರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸವಣೂರು ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ರಝಾಕ್ ಕೆನರಾ ಮತ್ತು ಯುವ ಉದ್ಯಮಿ ಅಬ್ದುಲ್ ಸಮದ್ ಸೋಂಪಾಡಿ ಸಂದರ್ಭೋಚಿತವಾಗಿ ಮಾತನಾಡಿದರು.


ಟ್ರಸ್ಟಿನ ಉಪಾಧ್ಯಕ್ಷ ಅಝೀಝ್ ಎಸ್ ಎಂ, ಗುತ್ತಿಗೆದಾರ ಇಸ್ಮಾಯಿಲ್ ಕಾನಾವು, ಸವಣೂರು ಯೂತ್ ಫ್ರೆಂಡ್ಸ್ ರಿ. ಅಧ್ಯಕ್ಷ ಶರೀಫ್ ಸಿ ಹೆಚ್, ಯುವ ಉದ್ಯಮಿ ಅಶ್ರಫ್ ಬಿ.ಸಿ, ರಝಾಕ್ ಚಾಪಲ್ಲ, ಬಶೀರ್ ಕಾಯರ್ಗ, ಅಶ್ರಫ್ ಜನತಾ, ಯಾಕೂಬ್ ಸವಣೂರು, ಸಹೀರ್ ರೋಯಲ್, ಹನೀಫ್ ಅತ್ತಿಕೆರೆ, ರಶೀದ್ ಪಟ್ಟೆ ಮೊದಲಾದವರು ಉಪಸ್ಥಿತರಿದ್ದರು. ನಝೀರ್ ಸಿ.ಎ ಸ್ವಾಗತಿಸಿ, ಫಾರೂಕ್ ಬಿ.ಎಂ ಸ್ಟೋರ್ ವಂದಿಸಿದರು.

LEAVE A REPLY

Please enter your comment!
Please enter your name here