ಪುತ್ತೂರು,ಸುಬ್ರಹ್ಮಣ್ಯ,ಬೆಳ್ತಂಗಡಿ ,ಕಡಬದಲ್ಲಿ ಮಿಂಚು ಪ್ರತಿಬಂಧಕ ಟವರ್ ಅಳವಡಿಕೆ- ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

0

ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ಸರಕಾರ


ಪುತ್ತೂರು: ಪ್ರತೀ ಮಳೆಗಾಲದಲ್ಲಿ‌ ಸಿಡಿಲು ಮತ್ತು ಮಿಂಚಿಗೆ ಅನೇಕ ಜೀವಗಳು ಬಲಿಯಾಗುತ್ತಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಮಿಂಚು ಪ್ರತಿಬಂಧಕ‌ ಟವರ್ ಅಳವಡಿಸಲು ಸರಕಾರ ತೀರ್ಮಾನಿಸಿದೆ ಎಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.


ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವರು ಪುತ್ತೂರು ಭಾಗದಲ್ಲಿ ಹೆಚ್ಚಾಗಿ ಮಿಂಚಿಗೆ ಜೀವ ಬಲಿಯಾಗುತ್ತಿದೆ ಮಳೆಗಾಲ ಆರಂಭ ಮತ್ತು ಕೊನೆಯ ದಿನಗಳಲ್ಲಿ ಮಿಂಚು ಹೆಚ್ಚಾಗಿ ಈ ಭಾಗದಲ್ಲೇ ಇರುತ್ತದೆ. ಶಾಸಕರಾದ ಅಶೋಕ್ ರೈ ಯವರು ಈಗಾಗಲೇ ಮನವಿ ಮಾಡಿದ್ದರು.‌ಮನವಿಯನ್ನು ಸರಕಾರ ಪುರಸ್ಕರಿಸಿದೆ. ಮಿಂಚು ಪ್ರತಿಬಂಧಕ ಟವರ್ ಅಳವಡಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆಯನ್ನು ನೀಡಿರುವುದಾಗಿ ಸಚಿವರು ತಿಳಿಸಿದರು. ಶಾಸಕ ಅಶೋಕ್ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here