ಪುತ್ತೂರು:ಕೊಳ್ತಿಗೆ ಮಣಿಕ್ಕರ ಸರಕಾರಿ ಪ್ರೌಢಶಾಲೆಯ 2024-25 ನೇ ಸಾಲಿನ ಪೋಷಕರ ಸಭೆ ಜೂ.22ರಂದು ನಡೆಯಿತು. ಸೈಯ್ಯದ್ ಗಫೂರ್ ಸಾಹೇಬ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಮುಖ್ಯೋಪಾಧ್ಯಾ ಶಾಲೆಯ ಸಮಗ್ರ ಕಾರ್ಯ ಯೋಜನೆಯ ಮಾಹಿತಿ ನೀಡುವುದರೊಂದಿಗೆ , ಪೋಷಕರ ಜವಾಬ್ದಾರಿ ಮತ್ತು ಮಕ್ಕಳ ಬಗ್ಗೆ ಗಮನವಿರಿಸಬೇಕಾದ ಅಂಶಗಳ ಬಗ್ಗೆ ಮಾಹಿತಿಯನ್ನು ನೀಡಿದರು.
![](https://puttur.suddinews.com/wp-content/uploads/2024/06/810a2f0d-376d-46e6-9ff0-7bac99970ccf.jpg)
ತೆರವಾದ ಸ್ಥಾನಕ್ಕೆ ಹೊಸದಾಗಿ ನೇಮಕಗೊಂಡ ಎಸ್.ಡಿ.ಎಂ.ಸಿ. ಸದಸ್ಯರಾದ ಮೆಹರುಬಿ ಮತ್ತು ಗೀತಾ ಇವರನ್ನು ಸ್ವಾಗತಿಸಲಾಯಿತು, ವಿವಿಧ ಸಮಿತಿಗಳನ್ನು ರಚನೆ ಮಾಡಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಯಿತು .ಕಾರ್ಯಕ್ರಮದಲ್ಲಿ ಎಲ್ಲಾ ಪೋಷಕರು ಹಾಗೂ ಎಸ್. ಡಿ ಎಮ್ , ಸಿ, ಅಧ್ಯಾಪಕ ವೃಂದ ಉಪಸ್ಥಿತರಿದ್ದರು. ಮುಖ್ಯಗುರು ನಳಿನಿ ಎಲ್ಲರನ್ನು ಸ್ವಾಗತಿಸಿ, ಉಮಾವತಿಯವರು ವಂದಿಸಿದರು. ಕರುಣಾಕರ ,ಗೀತಾ, ಸುಗುಣ, ಉಷಾ, ವಸಂತಿ.ಕೆ, ಪವಿತ್ರ ಸಹಕರಿಸಿದರು.