ಬಂದಾರು: ಗುಡ್ಡ ಜರಿದು ಮನೆಗೆ ಹಾನಿ

0

ಉಪ್ಪಿನಂಗಡಿ : ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ನಿವಾಸಿ ಹುಕ್ರಪ್ಪ ಎಂಬವರ ಮನೆ ಹಿಂಬದಿಯ ಗುಡ್ಡ ಜರಿದು ಬಿದ್ದು ಮನೆಗೆ ಹಾನಿಯುಂಟಾದ ಘಟನೆ ಗುರುವಾರ ಸಂಭವಿಸಿದೆ.
ಹುಕ್ರಪ್ಪ ರವರ ಮನೆಯ ಹಿಂಬದಿಯ ಗುಡ್ಡದ ಒಂದು ಭಾಗ ಸತತವಾಗಿ ಸುರಿಯುತಿದ್ದ ಮಳೆಗೆ ಕುಸಿದು ಮನೆಯ ಗೋಡೆಗೆ ಬಿದ್ದಿತ್ತು. ಇದರಿಂದಾಗಿ ಗೋಡೆಯಲ್ಲಿ ಬಿರುಕು ಮೂಡಿದ್ದು, ಅದೃಷ್ಠವಶಾತ್ ಯಾವುದೇ ಜೀವಹಾನಿ ಸಂಭವಿಸಲಿಲ್ಲ.


ಘಟನಾ ಸ್ಥಳಕ್ಕೆ ಸ್ಥಳೀಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿದ್ದ ಗುಡ್ಡದ ಮಣ್ಣು ತೆರವು ಕಾರ್ಯಾಚರಣೆಗೆ ಸುಮಾರು ೨೫ ಸಾವಿರಕ್ಕೂ ಅಧಿಕ ಮೊತ್ತ ಬೇಕಾಗಿದ್ದು, ಕಂದಾಯ ಇಲಾಖೆ ಪ್ರಾಕೃತಿಕ ವಿಕೋಪ ಪರಿಹಾರದಡಿ ಆರ್ಥಿಕ ಸಹಕಾರ ನೀಡಬೇಕೆಂದು ಸ್ಥಳೀಯ ಸಾಮಾಜಿಕ ಮುಂದಾಳು ಮಹಮ್ಮದ್ ಬಂದಾರು ಅಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here