ಕೋರಂಗದಲ್ಲಿ ರಸ್ತೆಗೆ ಭೂ ಕುಸಿತ, ತೆರವು

0

ಪುತ್ತೂರು: ಕೆದಂಬಾಡಿ ಗ್ರಾಪಂ ವ್ಯಾಪ್ತಿಯ ಕೋರಂಗ ಎಂಬಲ್ಲಿ ರಸ್ತೆಗೆ ಭೂ ಕುಸಿತ ಉಂಟಾಗಿ ರಸ್ತೆ ಸಂಪೂರ್ಣ ಬಂದ್ ಆದ ಘಟನೆ ಜು.30 ರಂದು ನಡೆದಿದೆ. ನಿರಂತರವಾಗಿ ಸುರಿದ ಮಳೆಗೆ ರಸ್ತೆ ಬದಿಯ ಧರೆ ಕುಸಿತಗೊಂಡಿದ್ದರಿಂದ ರಸ್ತೆ ಮೇಲೆ ಮಣ್ಣು ಬಿದ್ದು ರಸ್ತೆ ಸಂಪೂರ್ಣ ಮಣ್ಣಿನಲ್ಲಿ ಮುಚ್ಚಿ ಹೋಗಿತ್ತು. ತಕ್ಷಣವೇ ಕೆದಂಬಾಡಿ ಗ್ರಾಪಂ ವತಿಯಿಂದ ಜೆಸಿಬಿ ಮೂಲಕ ರಸ್ತೆಗೆ ಬಿದ್ದ ಮಣ್ಣನ್ನು ತೆರವು ಮಾಡುವ ಮೂಲಕ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಯಿತು. ಸ್ಥಳಕ್ಕೆ ಪಂಚಾಯತ್ ಸದಸ್ಯ ರತನ್ ರೈ ಕುಂಬ್ರ ಸಹಿತ ಹಲವು ಮಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here