ಕೊಂಡಪ್ಪಾಡಿ ಆನಂತ ಪದ್ಮನಾಭ ದೇವಸ್ಥಾನದಲ್ಲಿ ಅಟಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

0

ಆಲಂಕಾರು: ರಾಮಕುಂಜ ಗ್ರಾಮದ ಕೊಂಡಪ್ಪಾಡಿ ಆನಂತ ಪದ್ಮನಾಭ ದೇವಸ್ಥಾನದಲ್ಲಿ ಅಟಿ ಅಮಾವಾಸ್ಯೆ ಪ್ರಯುಕ್ತ ಸಂತಾನ ಪ್ರಾರ್ಥನೆ, ವಿಶೇಷ ಪೂಜೆ ನಡೆಯಿತು. ಆ.4ರಂದು ಬೆಳಿಗ್ಗೆ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ,ನಿತ್ಯಪೂಜೆ,ಸಂತಾನ ಪ್ರಾಪ್ತಿಗಾಗಿ ಸಂತಾನ ಪ್ರಾರ್ಥನೆ, ವಿಷ್ಣು ಸಹಸ್ರನಾಮ ಅರ್ಚನೆಯೊಂದಿಗೆ ವಿಶೇಷ ಪೂಜೆ ಜರುಗಿತ್ತು.


ಆಗಮಿಸಿದ ಊರ,ಪರವೂರ ಭಕ್ತಾದಿಗಳು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಮಕ್ಕಳು ಇಲ್ಲದವರು ಸಂತಾನ ಪ್ರಾರ್ಥನೆ ಹಾಗೂ ಸಂತಾನ ಪ್ರಾಪ್ತಿಯಾದ ಕುಟುಂಬಗಳು ಶ್ರೀ ದೇವರಿಗೆ ಹರಕೆಯನ್ನು ಸಮರ್ಪಿಸಿದರು. ಈ ಸಂಧರ್ಭದಲ್ಲಿ ಅನಂತ ಪದ್ಮನಾಭ ಸೇವಾ ಟ್ರಸ್ಟ್ ನವರು,ಪೆರ್ಲತ್ತಾಯ ಪ್ರತಿಷ್ಠಾನದವರು ಹಾಗು ಊರ ಪರವೂರ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here