ವಿದ್ಯಾಭಾರತಿ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟ- ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳ ತಂಡಗಳು ಪ್ರಥಮ

0

ಉಪ್ಪಿನಂಗಡಿ : ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆ ಇವರ ವತಿಯಿಂದ ಆ.24ರಂದು ಅಮೃತ ಭಾರತಿ ವಿದ್ಯಾಸಂಸ್ಥೆ ಹೆಬ್ರಿ ಇಲ್ಲಿ ನಡೆದ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ 14ರ ವಯೋಮಾನದ ಬಾಲಕ ಹಾಗೂ ಬಾಲಕಿಯರ ತಂಡವು ಪ್ರಥಮ ಸ್ಥಾನವನ್ನು ಪಡೆದು ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆಯಾಗಿದೆ. 14ರ ವಯೋಮಾನದ ಬಾಲಕ ವಿಭಾಗದಲ್ಲಿ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದ 8ನೇ ತರಗತಿಯ ವಿದ್ಯಾರ್ಥಿಗಳಾದ ಆಯತ್ತುಲ್ಲಾ ಸಲೀಂ, ಜಿತೇಶ್ ಎಸ್. ವಿ, 6ನೇ ತರಗತಿಯ ವಿದ್ಯಾರ್ಥಿಗಳಾದ ವಂಶಿ, ಸಹನ್ ಕೆ.ಎಸ್, ಪ್ರಣಿತ್ ರವಿ, ಅನ್ಶುಲ್ ಶೆಟ್ಟಿ, 7ನೇ ತರಗತಿಯ ವಿದ್ಯಾರ್ಥಿಗಳಾದ ಶಿಶಿರ್ ಜೆ ಸಾಲಿಯಾನ್, ಕೆ. ಅತುಲ್ ನಾಯಕ್, ವಚನ್ ಕನ್ಯಾನ, ನಿಶಾದ್ ಸುಲೈಮಾನ್ ಕೆ, ಮೊಹಮ್ಮದ್ ಇರಾಝ್, ಮೊಹಮ್ಮದ್ ಸೈಫುಲ್ಲಾ ಹಾಗೂ ಬಾಲಕಿಯರ ವಿಭಾಗದಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳಾದ ಎಂ.ಎಸ್ ಅನುಶ್ರೀ, ಎಂ.ಧನ್ವಿ ಶೆಟ್ಟಿ, ಸ್ತುತಿ ಶೆಟ್ಟಿ, 7ನೇ ತರಗತಿಯ ವಿದ್ಯಾರ್ಥಿಗಳಾದ ತೃಷಾ ಕೆ, ಹಂಸಿನಿ .ಜಿ , ಶ್ರೀಯ ಎಸ್ ಶೆಟ್ಟಿ, ಶ್ರಾವಣ್ಯ ಎಸ್, 6ನೇ ತರಗತಿಯ ವಿದ್ಯಾರ್ಥಿಗಳಾದ ಸಾನ್ವಿ ಸಿ.ಎಚ್, ಆರುಶಿ ವಿ. ಆರ್, ಅನುಷ್ಕ ಜೆ , 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ 10ನೇ ತರಗತಿಯ ಪ್ರಾಪ್ತಿ ಶೆಟ್ಟಿ, 9ನೇ ತರಗತಿಯ ಅನ್ವಿ ಆರ್ ಆಚಾರ್ಯ, ಸವ್ಯ ಎಂ, ತನ್ವಿ ಕನ್ಯಾನ ವಿದ್ಯಾರ್ಥಿಗಳ ತಂಡವು ವಿಜೇತರಾಗಿ ಕ್ಷೇತ್ರಿಯ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.
ಇವರಿಗೆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಗೋಪಿನಾಥ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿಯರಾದ ವಿದ್ಯಾ ,ಶ್ರೀರಂಜಿನಿ ತರಬೇತಿ ನೀಡಿರುತ್ತಾರೆ ಎಂದು ಸಂಸ್ಥೆಯ ಮುಖ್ಯಶಿಕ್ಷಕಿ ವೀಣಾ ಆರ್ ಪ್ರಸಾದ್ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here