ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಬೆಳ್ಳಿಚೆಡವು ಅಯ್ಯಪ್ಪ ಭಜನಾ ಮಂದಿರಕ್ಕೆ 1ಲಕ್ಷ ರೂಪಾಯಿ ಸಹಾಯಧನ- ಮಂಜೂರಾತಿ ಪತ್ರ ಹಸ್ತಾಂತರ

0

ಬಡಗನ್ನೂರು:ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಬೆಳ್ಳಿಚೆಡವು ಅಯ್ಯಪ್ಪ ಭಜನಾ ಮಂದಿರಕ್ಕೆ 3ನೇ ಬಾರಿಗೆ ಬಿಡುಗಡೆ ಮಾಡಿದ 1,00,000  ರೂಪಾಯಿ ಸಹಾಯಧನದ ಮಂಜೂರಾತಿ ಪತ್ರವನ್ನು ಜನಜಾಗೃತಿ ವಲಯ ಅಧ್ಯಕ್ಷ ವಿಕ್ರಮ್ ರೈ ಶಾಂತ್ಯ ಮತ್ತು ವಲಯ ಅಧ್ಯಕ್ಷ ದಿನೇಶ್ ರೈ ಕುತ್ಯಾಳರವರ ಉಪಸ್ಥಿತಿಯಲ್ಲಿ ವಲಯ ಮೇಲ್ವಿಚಾರಕ ಹರೀಶ್ ಶ್ರೀ ಅಯ್ಯಪ್ಪ ಭಜನಾ ಮಂದಿರ ಸಮಿತಿಯ ಪದಾಧಿಕಾರಿಗಳಿಗೆ  ಅ.29 ರಂದು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ  ಒಕ್ಕೂಟದ ಮಾಜಿ ಅಧ್ಯಕ್ಷ ಬಾಲಕೃಷ್ಣ ರೈ ಮೇನಾಲ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಚಂದ್ರ ಶೇಖರ, ಕಾರ್ಯದರ್ಶಿ ಪ್ರತಿನ್ ಕುಮಾರ್ ತಲೆಬೈಲು, , ಕೋಶಾಧಿಕಾರಿ  ಅಣ್ಣಯ್ಯ ಗೌಡ ,ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಪ್ರವೀಣ್ ರೈ ಮೇನಾಲ ಹಾಗೂ ಪದಾಧಿಕಾರಿಗಳಾದ ದೇವಪ್ಪ , ರೋಹಿತ್, ಬಾಬು, ರವಿ ಪುಳಿಮರಡ್ಕ, ನಿಶಾಂತ್ ಉದಯ ಶ್ರೀಕಾಂತ್,  ನಿತಿನ್ ತಲೆಬೈಲು ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ಷೇತ್ರದ  ಸೇವಾ ಪ್ರತಿನಿಧಿ ಸುಂದರ್ ಜಿ  ಸ್ವಾಗತಿಸಿ , ಪ್ರವೀಣ್ ರೈ ವಂದಿಸಿದರು.

LEAVE A REPLY

Please enter your comment!
Please enter your name here