ಕಡಬ: ಭಾಜಪ ಸುಳ್ಯ ಮಂಡಲ ಎಸ್.ಟಿ. ಮೋರ್ಚಾದ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ 74ನೇ ಜನ್ಮದಿನಾಚರಣೆ ಹಾಗೂ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಕೊೖಲ ಗ್ರಾಮದ ಏಣಿತಡ್ಕದಲ್ಲಿ ನಡೆಯಿತು.
ಪ್ರಧಾನಿ ನರೇಂದ್ರ ಮೋದಿಯವರಿಗೆ ಶಕ್ತಿತುಂಬಲು ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಬಿಜೆಪಿ ಸದಸ್ಯತ್ವ ಅಭಿಯಾನದ ಬಗ್ಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಎಸ್.ಟಿ. ಮೋರ್ಚಾದ ಅಧ್ಯಕ್ಷ ಗಂಗಾಧರ ಪೆರಿಯಡ್ಕ, ಪ್ರಧಾನ ಕಾರ್ಯದರ್ಶಿಗಳಾದ ಬಾಲಕೃಷ್ಣ ಏನೇಕಲ್ಲು, ಬಾಲಕೃಷ್ಣ ಅಲಂಗಪ್ಪೆ, ಬೂತ್ ಕಾರ್ಯದರ್ಶಿ ನಿರಂಜನ್, ಲ್ಯಾಂಪ್ ಸೊಸೈಟಿ ನಿರ್ದೇಶಕ ನೇತ್ರಾಕ್ಷ, ಗ್ರಾ.ಪಂ.ಮಾಜಿ ಸದಸ್ಯ ಸುಂದರ ನಾಯ್ಕ್, ಪ್ರಮುಖರಾದ ಯೋಗೇಂದ್ರ ನಾಯ್ಕ್, ಬಾಲಕೃಷ್ಣ ನಾಯ್ಕ ಕೊರಂತಾಜೆ ಹಾಗೂ ಬೂತ್ ಮಟ್ಟದ ಕಾರ್ಯಕರ್ತರು, ಹಿರಿಯರು ಉಪಸ್ಥಿತರಿದ್ದರು.